ಪೋಸ್ಟ್‌ಗಳು

ಮಾರ್ಚ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸವಿಜೇನು-2

ಇಮೇಜ್
  ಸವಿಜೇನು .. (Part-2) ಅದು ಬೇಸಿಗೆಯ ದಿನಗಳು. ಮುಂಗಾರು ಪೂರ್ವ ಅಕಾಲಿಕವಾಗಿ ಮಳೆಯಾಗಿತ್ತು. ಮಳೆಯಾದ ಕಾರಣ ದನ-ಕುರಿಗಳಿಗೆ  ಸಾಧಾರಣ ಹುಲ್ಲು ಬೆಳೆದಿತ್ತು. ಮಳೆ ಬಿದ್ದಮೇಲೆ ಜೀವಿಗಳು,ಕೀಟಗಳು,ಸರೀಸೃಪ ನವಿಲಿನಂತಹ ಪಕ್ಷಗಳ ಸಂತಾನ ಚಕ್ರ ಶುರು.. ಅದರಂತೆ ಮಿಡತೆಗಳ ಮೊಟ್ಟೆಯೊಡೆದು ಶಿಶು ಮಿಡತೆಗಳು,ಮಧ್ಯ ವಯಸ್ಕ  ಮಿಡತೆಗಳು ಯಾರಾದರೂ ನಡೆದಾಡಿದರೆ/ಪ್ರಾಣಿಗಳು ಓಡಾಡಿದರೆ ನೂರಾರು ಸಂಖ್ಯೆಯಲ್ಲಿ  ನಾನಾ ರಂಗಿನ ಮಿಡತೆಗಳು ಪುರ್ರನೇ ಹಾರಿ ಪಕ್ಕಕ್ಕೆ ಕುಳಿತುಕೊಳ್ಳುತ್ತಿದ್ದವು.ಮುಂಗಾರು ಹಸಿರನ್ನು ಈ ಮಿಡತೆಗಳೇ ತಿಂದು ಖಾಲಿ ಮಾಡುವವು. ಅದು ಜಮೀನಿನಲ್ಲಿ ಭೂಮಿಯ ಉಳುಮೆ ಮಾಡಲು ಉಲುಸಾದ ಕಾಲ.ಅಪ್ಪ ಎತ್ತುಗಳ ಕಟ್ಟಿ ನೇಗಿಲು ಹೊಡೆಯುತ್ತಿದ್ದರು. ಅಮ್ಮ ಹಳೆಯಕೂಳೆಗಳು,ಮುಳ್ಳುಗಳ ಆರಿಸುತ್ತಿದ್ದರು. ನಾನೂ ಮಡಿಕೆಯ ಸಾಲಿನಲ್ಲಿ ಮಣ್ಣಿನ ವಾಸನೆಯ ಅಹ್ಲಾದದೊಂದಿಗೆ ಸ್ವಲ್ಪ ಹೊತ್ತು ಕೂಳೆಗಳು ಆರಿಸಿದ್ದೆ. ಆಗ ನಮಗೆ ನಿರಂತರ ಕೆಲಸ ಮಾಡದೇ ಮಧ್ಯದಲ್ಲಿ ಆಕಡೆ-ಈಕಡೆ ರೆಸ್ಟ್ ನೆಪದಲ್ಲಿ ಸುತ್ತಾಡಿ ಬರುವುದು ಸಾಮಾನ್ಯವಾಗಿತ್ತು.ಹಾಗೆ ಸುತ್ತಾಡಿ ಬರಲು   ಅಂದು  ಅಲ್ಲೇ ಸಮೀಪದಲ್ಲಿದ್ದ ದಾಸಪ್ಪನ ಬೇಲಿಗೆ ಹೋದೆ.ನಾವು ಕೆಲಸ ಮಾಡುವಲ್ಲಿಗೆ ಹತ್ತಿರವಿದ್ದ ಆ ಬೇಲಿಯಲ್ಲಿ ಅಲ್ಲೊಂದು ಇಲ್ಲೊಂದು ಬೇವಿನಮರಗಳು,ಹುಣಸೇಮರಗಳು ಇದ್ದವು. ನಾನು ಬೇಲಿಗೆ ಹೋಗಿದ್ದು  ಜೇನು ಹುಡುಕಲು!ಹಾಗೆ ಬೇಲಿಯಲ...

ಸವಿಜೇನು-1

ಇಮೇಜ್
 ಸವಿಜೇನು...         Part-1 ನನಗೆ ನಾಲ್ಕೈದು ವರ್ಷ ಇರಬಹುದು. ನಮ್ಮ ತಂದೆಯವರು  ಕಿರುಬೆರಳ ಗಾತ್ರದ ಯಾವುದೋ ಒಂದು ಮರದ ಕಾಂಡದ ಜೊತೆ ತಟ್ಟೆಯಲ್ಲಿ ಏನೋ ಹಾಕಿಕೊಂಡು ಬಂದರು. ಆ ಕಾಂಡದಲ್ಲಿ ಒಂದು ಹಿಡಿಗಾತ್ರದ ದಪ್ಪ ಮತ್ತು ಈಗಿನ ನನ್ನ ಎರಡೂ ಅಂಗೈ ಅಗಲದಷ್ಟು  ಏನೋ ಇರುವುದು ಕಂಡು ಏನೋ ತಂದಿದ್ದಾರೆ  ಎಂದೆನಿಸಿತು.ತಿನ್ನೋಣ ಎಂದರೇ  ಅದು  ನಿಜವಾಗ್ಲೂ ತಿನ್ನುವುದೆಂಬ ಖಾತರಿ ಇಲ್ಲ.. ತಟ್ಟೆಯಲ್ಲಿ ಹಾಕಿಕೊಂಡು ಬಂದಿದ್ದರಿಂದ ಅದು ತಿನ್ನುವ ವಸ್ತುವೇ ಎಂಬ ನಂಬಿಕೆ.ಆಗ ನನಗೆ ಅಮ್ಮ   ತೋರುಬೆರಳಿನಿಂದ ನನ್ನ ಬಾಯಿಗೆ ನೆಕ್ಕಿಸಲು  ಅದರ ರುಚಿ ಸಿಹಿ ಸಿಹಿ..!!ಚೆನ್ನಾಗಿಯೇ ಇದೆ.ಆ ರುಚಿಯನ್ನು ಅದುವರೆಗೂ  ನಾನು ತಿಂದಿದ್ದೂ ನನಗೆ ನೆನಪೇ ಇರಲಿಲ್ಲ.  ಅದೇ ಮೊದಲ ನೆನಪು...ಸಿಹಿಯ ರುಚಿ ನಾಲಗೆಗೆ ಸಿಕ್ಕು ಅಬ್ಬಾ ಎಲ್ಲದೂ ನಾನೊಬ್ಬನೇ ತಿಂದು ಬಿಡಲೇ?? ಎನ್ನುವ ಬಯಕೆ ಮೊದಲಸಲನೇ ಅನಿಸಿಬಿಡ್ತು ನೋಡಿ.ನಾನು ಯಾವುದರ ಬಗ್ಗೆ ಹೇಳ್ತಾ ಇದ್ದೀನಿ ಅಂತ ಬಹುಶಃ ನಿಮಗೆ ಅರ್ಥ ಆಗಿರಬಹುದು.ಹೌದು ಅದೇ 'ಜೇನಿ'ನಬಗ್ಗೆಯೇ ನಾನು ಹೇಳ ಹೊರಟಿರುವ ವಿಷಯ. ಜೇನು ಎಂದರೇನೇ ಎಷ್ಟೋಂದು ಮಧುರ ಅಲ್ಲವೇ? ಈ ಪ್ರಪಂಚದಲ್ಲಿ ನಾವು  ಕೃತಕವಾಗಿ ಸೃಷ್ಠಿಸಿರುವ ಎಲ್ಲ ಸಿಹಿಗಳನ್ನು ಒಂದು ಬದಿ ಇರಿಸಿ,ಇನ್ನೋಂದು ಬದಿ ಜೇನು ತುಪ್ಪ  ಮಾತ್ರ  ಇರಿಸಿ...

ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು

 *_ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು_*                       *ಶಿಕ್ಷಕ ವೃತ್ತಿಗೆ ಸೇರಿ ಹದಿನಾರು ಸಂವತ್ಸರ ಕಳೆಯಿತು.ನನ್ನ ಅನೇಕ ಶಿಷ್ಯೋತ್ತಮರು ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಇನ್ನೂ ಹಲವರು ಮೆಡಿಕಲ್,ಇಂಜಿನಿಯರಿಂಗ್, ಡಿಪ್ಲೋಮಾ ,ಐಟಿಐ ಪದವಿಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಗಣನೀಯ ಪ್ರಮಾಣದ ಶಿಷ್ಯಂದಿರು ಲಾರಿ ಡ್ರೈವರ್,ಕ್ಲೀನರ್ ಆಗಿಯೂ,ಕೂಲಿ ನಾಲಿ ಮಾಡುತ್ತಾ ಇನ್ನೂ ಕೆಲವರು ಕುರಿಸಾಕಿಕೊಂಡು ಬದುಕನ್ನು ಕಂಡುಕೊಂಡಿದ್ದಾರೆ. ಈ ಮೊದಲು ನಾನು ಕೆಲಸ ಮಾಡುತ್ತಿದ್ದುದು ತಾಲ್ಲೂಕು ಕೇಂದ್ರದಿಂದ 40 km ಅಂತರ ಇದ್ದುದರಿಂದ SSLC,PUC,KPSC ಇಂತಹ ಪರೀಕ್ಷಾ ಕರ್ತವ್ಯದಿಂದ ದೂರವೇ ಉಳಿದಿದ್ದ ನನಗೆ ಈ ಬಾರಿಯ P U C ಪರೀಕ್ಷೆಯ ಮೇಲ್ವಿಚಾರಕ (invigilator)ಆಗಿ ಕರ್ತವ್ಯಕ್ಕೊಂದು ಅವಕಾಶ ಸಿಕ್ಕಿತ್ತು. ನಮ್ಮ ಶಾಲೆಯಲ್ಲಿ ನಾನೇ/ನಾವೇ ಪಾಠ ಮಾಡಿದ ಮಕ್ಕಳಿಗೆ ಪರೀಕ್ಷೆಗಳು ಮಾಡುತ್ತಿದ್ದೆವಾದರೂ ಬೇರೆ ಶಾಲೆ, ಕಾಲೇಜು ಮಕ್ಕಳಿಗೆ ಪರೀಕ್ಷೆಗಳು ನೀಡಿ ಅವರನ್ನು ಅವಲೋಕಿಸುವ ಅವಕಾಶ ಸಿಕ್ಕಿರಲಿಲ್ಲ. ಪರೀಕ್ಷಾ ಕರ್ತವ್ಯದ ಆದೇಶ ಬಂದಿದೆ ನಾಳೆ ಪೂರ್ವಭಾವಿ ಸಭೆಗೆ ಹೋಗುವ ಬಗ್ಗೆ ಹಿರಿಯ ಸಹೋದ್ಯೋಗಿಯ ಜೊತೆ ವಿಷಯ ಹಂಚಿಕೊಂಡೆ.ಅದಕ್ಕೆ ಸ್ಪಂದಿಸಿದ ಅವರು "ಸರ್  PUC EXAM ಡ್ಯೂಟಿನಾ??? ಅಯ್ಯಯ್ಯಪ್ಪಾ...! ಸಾರ್ ಬಾರಿ ಕಾಫಿ ಚೀಟಿ ಹೊಡಿತಾರೆ...