ಪೋಸ್ಟ್‌ಗಳು

ಏಪ್ರಿಲ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸವಿಜೇನು part-9

ಇಮೇಜ್
 *ಸವಿಜೇನು-Part-9*    ✍️ _ನಾಗೇಂದ್ರ ಬಂಜಗೆರೆ_ *ಆನೆ ಹುಲಿಗಳಿರುವ ಮದುಮಲೈ ಟೈಗರ್ ಪಾರೆಸ್ಟ್ ನಲ್ಲಿ ಜೇನು..* *ದಿನಾಂಕ:14-04-2018 ರಂದು ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿ ನನ್ನ ಕರ್ತವ್ಯದ ಸ್ಥಳದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ನಮ್ಮ ಪಯಣದಹಾದಿ ಶುರುವಾಗಿತ್ತು. ನಾನು,ಕುಮುದಾ  ಮಗಳು ತನೇಹಾ,  ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇರುತ್ತಿದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ  110-120 km/h ಇರುತ್ತದೆ. ಅದರಂತೆ  ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ಅಲ್ಲಿ ರಾತ್ರಿ ಅಲ್ಲಿಯೇ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು.  ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬಾರಿಯೂ  ವಿಶೇಷ ವಿಭಿನ್ನ...ಮೈಸೂರೇ ಹಾಗೇ...ಅಂದು  ಯೋಜನೆಯಂತೆ ಶ್ರೀರಂಗ ಪಟ್ಟಣ ದ ಬಳಿ ಯಾವುದೂ ಒಂದು ಹೋಟೆಲ್ ಲ್ಲಿ  ವೆಜ್ ಊಟವನ್ನು ಪಾರ್ಸಲ್ ಕಟ್ಟಿಸಿಕೊಂಡು ಮಗಳಿಗೆ ಕಾರಿನಲ್ಲೇ ಊಟ ಮಾಡಿಸುತ್ತಾ ಹೆದ್ದಾರಿಯ ದಾಟಿ ಮೈಸೂರು ನಗರಕ್ಕೆ ಬಂದೆವು. ನಾವು ಹೋಗುವ ಕೆಲವೇ ಹೊತ್ತಿನಲ್...

ಸವಿಜೇನು part-8

ಇಮೇಜ್
#ಸವಿಜೇನು_part_8 _ಜೇನಿನ History ಯಲ್ಲೊಂದು ಕಳ್ಳನ Mistry..._ ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು   ದೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ  ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ ಹಿರಿಯೂರಿನಲ್ಲಿ  ಕಾರ್ ಗ್ಯಾರೇಜ್ ಮಾಲಿಕ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬರ್ರಿ  ಬ್ರದರ್ ನೋಡೋಣ ಎಂದು ಹೇಳಿದ್ದರು.  2014 ನೇ ಇಸವಿಯ ಮಾರ್ಚ್ ತಿಂಗಳಲ್ಲಿ  ಒಂದಷ್ಡು ದುಡ್ಡು ಹಿಡಿದುಕೊಂಡು  ಹಿರಿಯೂರಿನ ಜೇಮ್ಸ್ ಮನೆಗೆ  ಬಂದೆ. ಹಳೆಯ ಸ್ನೇಹಿತ ಜೇಮ್ಸ್  ನಾನು ಮನೆಗೆ ಹೋದ ಸಂಭ್ರಮಕ್ಕೆ ವೆರೈಟಿ ವೆರೈಟಿ  ತಿಂಡಿ ತಿನಿಸು ಮಾಡಿಸಿದ್ದ. ಇಬ್ಬರೂ ತಿಂಡಿಯನ್ನೇ ಊಟದಂತೆ ಹೊಟ್ಟೆತುಂಬಾ ಮಾಡಿ ಶ್ರೀಧರ್  ಗ್ಯಾರೇಜ್ ಬಳಿ ಬಂದೆವು. ನಮ್ಮ ಬಜೆಟ್ ಇಷ್ಟು ಎಂದು ಹೇಳಿದ್ದಕ್ಕೇ  ಅವರು ಯಾರು ಯಾರಿಗೋ ಕಾಲ್ ಮಾಡಿ  ಈ  ಬಜೆಟ್ ಗೆ ಒಂದು ಕಾರು ಬೇಕು ಎಂದೇಳಿದರು. ಅದಕ್ಕೆ ಅಮರಾಪುರದಲ್ಲಿ  ಒಂದು ಕಾರ್ ಇದೆ,ಆದರೆ ಯಾವುದೋ ಪಾರ್ಟಿ ನೋಡಿಹೋಗಿದ್ದಾರೆ ಸಂಜೆಗೆ ಪೈನಲ್ ಮಾತು ತಿಳಿಸುವೆವು ಎಂದು ಹೇಳಿದ್ದರಿಂದ  ಸಂಜೆ ನೋಡುವ ಬಿಡಿ  ಜೇಮ್ಸ್  ಎಂದು ಹೇಳಿದೆ. ಜೇಮ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮ...

ಸವಿಜೇನು part-7

ಇಮೇಜ್
#ಸವಿಜೇನು_part_7 ✍️ ನಾಗೇಂದ್ರ ಬಂಜಗೆರೆ.  (ಓದಿನ ಸಮಯ:7 ನಿಮಿಷ) ನಮ್ಮ ಹಳ್ಳಿಗಾಡಿನ ಅಡವಿಯಲ್ಲಿ ಇಚ್ಚಾನುಸಾರ ತಿರುಗಿ ನನ್ನದೇ ತಿರುಗಾಟದ ಜಾಲವನ್ನು  ಮಾಡಿಕೊಂಡಿದ್ದ ನಾನು ನನ್ನ ಎಂಟನೇ ತರಗತಿಗೆ ನನ್ನ ವ್ಯಾಪ್ತಿಯನ್ನು ಬಿಟ್ಟು ಹಾಸ್ಟೆಲ್ ಸೇರಬೇಕಾಯಿತು.ಸಹಜವಾಗಿ  ಅಪರಿಚಿತ ನಗರ ಜೀವನ ಪದ್ದತಿ ನಮ್ಮ ಹಳ್ಳಿಗರಿಗೆ ಅಷ್ಟಾಗಿ ಅಚ್ಚುಮೆಚ್ಚನಿಸುದಿಲ್ಲವಾದರೂ ಶಾಲೆ ಯಿಂದ ಹಾಸ್ಟೆಲ್, ಹಾಸ್ಟೆಲ್ ನಿಂದ ಶಾಲೆ ಹೀಗೆ ಈ ಎರಡರ ಮದ್ಯೆಯೇ ತಿರುಗಾಡಿ ನಮ್ಮೂರೆ ನಮಗೆ ಚಂದ ಎನಿಸಿದ್ದು ಸುಳ್ಳಲ್ಲ...ನಮ್ಮ ಹಾಸ್ಟೆಲ್ ಇದ್ದುದು ಚಳ್ಳಕೆರೆ ನಗರದ APMC ಮಾರುಕಟ್ಟೆಯ ಬಳಿ... ಆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಹಣಕ್ಕಾಗಿ ಕೊಟ್ಟು ತೆಗೆದುಕೊಳ್ಳುವ ವ್ಯವಹಾರದಂತೆಯೇ ಇಡೀ ನಗರವಾಸಿಗಳೆಲ್ಲರೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಯಾರೂ ಯಾರನ್ನೂ ಮಾತಾಡಿಸುತ್ತಿರಲಿಲ್ಲ.ನಗರದ ನಾಗರಿಕರು  ಆರ್ ಸಿ ಸಿ ಯಿಂದ ದೊಡ್ಡ ದೊಡ್ಡ  ಮನೆಗಳ ಕಟ್ಟಿಸಿ ದುಡ್ಡು ಹಣಕಾಸಿನಲ್ಲಿ ಮಾತ್ರ ಶ್ರೀಮಂತರೇ ವಿನಃ ನಮ್ಮ ಹಳ್ಳಿಗುಡಿಸಲ ಹೃದಯ ಶ್ರೀಮಂತರಂತೆ ಎಂದೂ ಅಲ್ಲ.. ಇದು ನಗರ ವಿಸ್ತರಿಸಿದಂತೆಲ್ಲಾ ಹೃದಯ ವೈಶಾಲ್ಯತೆ ಕುಗ್ಗಿ ಸಂಕುಚಿತಗೊಂಡು ಈಗ ಸ್ವಾರ್ಥಪರ ಜೀವನ ಈ ನಗರದ ನಾಗರೀಕರದು... ಹಳ್ಳಿ ವಿದ್ಯಾರ್ಥಿಗಳು ನಗರ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಲೋಸುಗ ಇರುವ ಸರ್ಕಾರದ ಯೋಜನೆಗಳಲ್ಲೊಂದು ಈ ಹಾಸ್ಟೆಲ್ . ಎಲ್ಲರೂ ಹಳ್ಳ...

ಸವಿಜೇನು part-6

ಇಮೇಜ್
 #ಸವಿಜೇನು_part -6 ✍️ನಾಗೇಂದ್ರ ಬಂಜಗೆರೆ         ನಮ್ಮದು ಅಪ್ಪಟ ಬಯಲು ಸೀಮೆ.ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ. ಅದು unlimited ಆಗಿ ಇರದೇ ಬಹಳ Limit ಆಗಿಯೇ ಇರತ್ತಿತ್ತು. ಆ ಕಡಲೇಕಾಯಿ ಚೀಲದ ಪಕ್ಕದಲ್ಲಿ ಇದ್ದ ನಾಲ್ಕಾರು ಚೀಲ ಶೇಂಗಾಕಾಯಿಯನ್ನು ಬಿಲ್ ಕುಲ್ ಮುಟ್ಟುವ ಹಾಗೆ ಇರಲಿಲ್ಲ.ಅದು ಮುಂಬರುವ ಮಂಗಾರಿಗೆ ಬಿತ್ತಲಿಕ್ಕೆ ಅಂತ  ಆಯ್ದು ತೆಗೆದಿರಿಸಿದ ಕಡಲೆಕಾಯಿ. ಮೇ ಜೂನ್ ತಿಂಗಳಲ್ಲಿ ಕಡಲೇಕಾಯಿ ಸುಲಿದು ಮಳೆಗಾಲಕ್ಕೆ ಬೀಜಬಿತ್ತಲು ಒಪ್ಪ ಮಾಡುವ ಕೆಲಸ ಆರಂಭ ಆಗುತ್ತಿತ್ತು. ಆಗ ಮಾತ್ರ ಕಡಲೆಕಾಯಿಯನ್ನು ಸುಲಿಯುವ ನೆಪದಲ್ಲಿ ಒಂದಷ್ಟು ಹೆಚ್ಚಿಗೆ ತಿನ್ನುತ್ತಿದ್ದೆವು. ಅದು ನಾಲ್ಕೈದು ದಿನಕ್ಕೆ ಮುಗಿದು ಹಸನು ಮಾಡಿದ ಬೀಜಕ್ಕೆ ಕೆಂಪಿರುವೆಗಳು ಹೋಗಿ ತಿನ್ನಬಾರದೆಂದು  ಡಿ ಡಿ ಟಿ ಪುಡಿಯನ್ನು ಹಾಕಿ ಹುಷಾರಾಗಿ ಒಂದು ಕಡೆ ಎತ್ತಿಡುತ್ತಿದ್ದರು. ಆಗ ತಿನ್ನಲು ಉಳಿಯುತ್ತಿದ್ದುದು ಬಿತ್ತಲು ಸೂಕ್ತವಲ್ಲದ ಎಳಸು ಬೀಜಗಳು. ಸೀರಲು ಎಂದು ಕರೆಯುವ ಬಹಳ ರುಚಿಕಟ್ಟಾದ ಈ ಸೀರಲು ಬೀಜ ಅಪರೂ...

ಸವಿಜೇನು part-5

ಇಮೇಜ್
 #ಸವಿಜೇನುpart_5 ✍️ _ನಾಗೇಂದ್ರ ಬಂಜಗೆರೆ_ ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು,ಕಾಡುಹಂದಿಗಳು ತಿವಿಯುವುದು,ಹಾಗೂ ಪೊದೆಗಳಲ್ಲಿ ಹಾವುಗಳು..!  ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ  ಬಂದೊದಗಬಹುದಾದ ಅಪಾಯದ ಸಾದ್ಯತೆ,   ಇಳಿಯಲು  ಹತ್ತಲು  ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು..ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು. ಏನೆಲ್ಲಾ ಆದರೂ ಜೇನು ತಿನ್ನುವುದು,ಜೇನು ಹುಡುಕುವುದು ಕಡಿಮೆ ಆಗಲಿಲ್ಲ.ವರ್ಷಗಳು ಕಳೆದಂತೆ ನಾನು ಜೇನಿ‌ನ ವಿಷಯದಲ್ಲಿ ಬಹಳ ಪರಿಣಿತನಾದೆ.ನನ್ನ ಜೇನು ಕೃಷಿ ನಿರಂತರವಾಗಿ ಮುಂದುವರೆದಿತ್ತು.ಈ ಹಿಂದೆ ಜೇನು ಹುಡುಕಲು,ಜೇನು ಕೀಳಲು ಪಡುತಿದ್ದ ಪ್ರಯಾಸ ಬಹಳಮಟ್ಟಿಗೆ ಸುಧಾರಿಸಿತು. ಅನುಭವದಿಂದ ಅನೇಕ ಪಾಠಗಳನ್ನು ಕಲಿತ ನಾನು  ಈ ದಿನಗಳಲ್ಲಿ ಬಹುತೇಕ Smart techniques ಬಳಸಿದೆ ಎಂದೆನ್ನಬಹುದು.. ದೈಹಿಕವಾಗಿ ಮಾನಸಿಕವಾಗಿ ಒಂದಷ್ಟು ವಿಕಸನ ನನ್ನಲ್ಲೂ ಆಗಿತ್ತು.ಸಾಧ್ಯ ಸಾಧ್ಯತೆ ಗಳನ್ನು ಬಹುಬೇಗ ಗುರುತಿಸುವ ಹಂತಕ್ಕೆ ಬಂದಿದ್ದೆ. ಅದೇನೆಂದರೆ ನಾನು ಜೇನು ಬೇಕೆಂದರೇ   ಗಿಡಗಂಟೆಗಳು,ಪೊದರು ಗಳಲ್ಲಿ ಹುಡುಕುವ ಬದಲು ನೀರು ಇರುವ ಜಾಗಕ್ಕೆ ಮೊದಲು ಬೇಟಿಕೊಡುತ್ತಿದ್ದೆ. ಬೇಸಿಗೆಯಲ್ಲಿ ನೀರುಕುಡಿಯಲು  ದಾಂಗುಡಿ ಇಡುತಿದ್ದ ನೂರಾರು ಜೇ...

ಸವಿಜೇನು part-4

ಇಮೇಜ್
 ಸವಿಜೇನು_Part-4 ✍️ _ನಾಗೇಂದ್ರ ಬಂಜಗೆರೆ_ ನನ್ನ ಹೈಸ್ಕೂಲು ದಿನಗಳಲ್ಲಿ ಜೇನು ಹುಡುಕುವುದು ನನ್ನ ಸಾಮಾನ್ಯ ಹವ್ಯಾಸ ಆಗಿತ್ತು.ನಮ್ಮ ಸಂಬಂಧಿಕರಿಗೆಲ್ಲಾ ನಮ್ಮದು ಜೇನುತುಪ್ಪ ಸಪ್ಲೈ ಮಾಡುವ ಮನೆ ಆಗಿತ್ತು.ಯಾರ ಮನೆಯಲ್ಲೂ ಜೇನುತುಪ್ಪ ಇರಲಿಲ್ಲ ಅಂದ್ರೂ ನಮ್ಮ ಮನೆಯಲ್ಲಿ  ಮಾತ್ರ ಕನಿಷ್ಟಪಕ್ಷ ಒಂದೋ ಎರಡೋ  ಕ್ವಾಟರ್ ಬಾಟಲ್ ನಲ್ಲಿ ಖಂಡಿತಾ ಇದ್ದೇ ಇರುತಿತ್ತು.ಡಿಸೆಂಬರ್ ನಿಂದ ಆರಂಭವಾಗುತಿದ್ದ  ಈ ಜೇನು ಬೇಟೆ ಕೊನೆಯಾಗುತ್ತಿದ್ದದು ಮತ್ತೆ ಜೂನ್ ಜುಲೈಗೆ. ಅಲ್ಲಿಯವರೆಗೂ ನಾನು ಪ್ರತಿದಿನ ಕನಿಷ್ಠ ಎರಡು ಮೂರು  ಜೇನು ಖಾಯಂ ಆಗಿ ತಿಂದೇ ತಿನ್ನುತ್ತಿದ್ದೆ. ಕೆಲವೊಂದು ದಿನ  ಒಂದೇ ದಿನಕ್ಕೇ ಹತ್ತು-ಹದಿನೈದು ಜೇನು ಕಿತ್ತು ತೆಗೆದಿರುವ ದಿನಗಳೂ ಇದ್ದಾವೆ. ಬೇಸಿಗೆಯ ದಿನಗಳಲ್ಲಿ ಏನೇ ಕೃಷಿ ಕೆಲಸಗಳಿದ್ದರೂ ಹನ್ನೋಂದು ಹನ್ನೆರಡು ಗಂಟೆಯವರೆಗೆ ಕೆಲಸ. ಆಮೇಲೆ ಪೂರ್ಣ ವಿರಾಮ. ಮೂರುವರೆ ನಾಲ್ಕು ಗಂಟೆಯವರೆಗಿನ ಸಮಯ ಸಂಪೂರ್ಣ ನನ್ನದೇ. ಆದ್ದರಿಂದ ನಮ್ಮ ಮನೆಯ ಕೇಂದ್ರದಿಂದ ಎರಡು ಕಿಮೀ 360°ನನ್ದೇ ಏರಿಯಾ.ಆ ವ್ಯಾಪ್ತಿಯೊಳಗಿನ ಶೇ90% ಜೇನುಗಳು ನನ್ನದೇ ಪಾಲಾಗುತ್ತಿದ್ದವು.ಯಾರದ್ದೋ ತೋಟ,ಹೊಲ ಗದ್ದೆಗಳ ಬೇಲಿಯ ಸುತ್ತಲೂ ತಿರುಗಾಡುತ್ತಿದ್ದರೆ ಕೆಲವರು  ಜೇನು ಕೀಳುವ ಹುಡುಗ ಬಂದಿದ್ದಾನೆಂದು, ಅವರುಗಳಿಗೆ ಆಕಸ್ಮಿಕವಾಗಿ ಕಂಡಂತಹ ಜೇನುಗಳನ್ನು ನನಗೆ ತೋರಿಸಿ ಕಿತ್ತುಕೊಡಲು ವಿನಂತಿಸುತ್ತಿದ್...