ಸಕಲೇಶಪುರ ಪಯಣ..
ಸಕಲೇಶಪುರ ಪಯಣ.. ನಕ್ಷತ್ರ ಆಕಾರದ ಮಂಜ್ರಾಬಾದ್ ಕೋಟೆ ಬಹಳ ದಿನಗಳಿಂದ ಕಣ್ಣುಕುಕ್ಕಿಸಿತ್ತು.ಎರಡ್ಮೂರು ವರ್ಷಗಳು ಹೋಗಬೇಕು ಹೋಗಬೇಕು ಎಂದೆನಿಸಿದರೂ ಅದ್ಯಾಕೋ ಸಮಯ ಮತ್ತು ಹಣದ ಕಾಂಬೀನೇಷನ್ ಆಗದೇ ಹೋಗಲು ಸಾಧ್ಯ ಆಗಿರಲಿಲ್ಲ. ದಿನಾಂಕ: 13-10-2018 ರಂದು ಇದಕ್ಕೆ ಮುಹೂರ್ತ ಪಿಕ್ಸ್ ಮಾಡಿದೆವು. ಅಂದು ಮಧ್ಯಾಹ್ನ ಮೂರಗಂಟೆಗೆ ತರೀಕೆರೆಯಿಂದ ನಾನು ಕುಮುದಾ,ಮಗಳು ತನೇಹಾ ಮತ್ತು ಶಿವು ಕುಮುದಾಳ ತವರು ನರಸಿಂಹರಾಜಾಪುರಕ್ಕೆ ಹೊರಟೆವು. ನಾಲ್ಕುವರೆ- ಐದಕ್ಕೆ ನರಸಿಂಹ ರಾಜಾಪುರ ತಲುಪಿ ಅಲ್ಲಿಯ ಮನೆಯಲ್ಲಿ ಕೇವಲ ಅರ್ಧ ಗಂಟೆ ಇದ್ದು ಆಮೇಲೆ ಬಾಳೆ ಹೊನ್ನೂರು ತಲುಪಿದೆವು.ಬಾಳೆಹೊನ್ನೂರಿನಲ್ಲಿದ್ದ ನಮ್ಮ ಬಂಧು ಪೂರ್ಣೇಶ್ ಮನೆಗೆ ಹೋದೆವು. ಅವರು ನಾವು ಬರುವೆವು ಎಂದು ಚೌ ಚೌ ಬಾತ್ ಅನ್ನು ಮಾಡಿದ್ದರು.ಅದಕ್ಕೂ ಮುಂಚೆ ಒಂದೆರಡು ಬಾರಿ ಸ್ವೀಟ್ ಮತ್ತು ಕಾಪಿ ಟೀ ಯನ್ನು ಕುಡಿದ್ದರಿಂದ ಸ್ವಲ್ಪವೇ ಕೊಡಿ ಎಂದರೂ ತಿನ್ನಿ ಮಾರ್ರೆ ಎಂದು ಬಹಳಷ್ಟು ಹಾಕಿದ್ದರು. ನನ್ನ ಪಾಲಿನ ಎಲ್ಲಾ ಕೇಸರಿ ಬಾತ್ ನ್ನು ಪಕ್ಕದಲ್ಲಿ ಕುಳಿತಿದ್ದ ಅಳಿಯ ಶಿವುಗೆ ಹಾಕಿದೆ.ಅವನೋ ಅಳುವ ಮುಖ ಮಾಡಿಕೊಂಡು ಗೆಸ್ಟ್ ಮನೆಗೆ ಬಂದೀವೀ ವೇಸ್ಟ್ ಮಾಡಬೇಡ ಎಂದೇಳಿದ್ದಕ್ಕೆ ಒಲ್ಲದ ಮನಸ್ಸಿನಿಂದ ಅಷ್ಟನ್ನೂ ತಿಂದು ಮಂಪರು ಬಂದ ಹಾಗೆ ಮಾಡುತ್ತಿದ್ದ. ಅಂದು ಬಹುಶಃ ಒಂದು ತುತ್ತು ಹೆಚ್ಚಿಗೆ ಹಾಕಿದ್ದರೂ ಅಲ್ಲೇ ಕಕ್ಕಿಬಿಡುತ್ತಿದ್ದೆ ಮಾಮ ಎಂದೇಳಿ ಹೊರ...