ಒಳ್ಳೆಣ್ಣೆ ವಿಷವಾದಾಗ...
ಒಳ್ಳೆಣ್ಣೆ ವಿಷವಾದಾಗ..... ಹಲಸು- ಮಾವಿನ ಹಣ್ಣಿನ ಸೀಜನ್ ನಲ್ಲಿ ನಮ್ಮ ಮನೆಯಲ್ಲಿ ಎರಡೂ ಹಣ್ಣಿನ ಕಲರವ ಜೋರಾಗಿಯೇ ಇರುತ್ತದೆ...ಅಚ್ಚಮಲೆನಾಡಿನ ನರಸಿಂಹರಾಜಾಪುರದಲ್ಲಿ ಮತ್ತು ಅರೆ ಮಲೆನಾಡಿನ ತರೀಕೆರೆಯಲ್ಲಿ ಕುಮುದಾಳ ತಾತ ನೆಟ್ಟು ಬೆಳೆಸಿರುವ ಮಾವಿನ ಮರದಿಂದ ತಿನ್ನುವವರೆಲ್ಲಾ ತಿಂದು ಬಿಟ್ಟು ಅಳಿದುಳಿದ ಹತ್ತಿಪ್ಪತ್ತು ಕೆಜಿಯಷ್ಟಾದರೂ ಮಾವಿನ ಕಾಯಿಗಳು ಸಿಕ್ಕೇ ಸಿಗುತ್ತಾವೆ.ಮನೆಯಲೆಲ್ಲಾ ಮಾವಿನ ಘಮ ಘಮಿಸುವ ಸುವಾಸನೆಯಿದ್ದರೆ, ಅದರ ಜೊತೆಗೆ ಬರುವ ಇನ್ನೊಂದು ಹಣ್ಣು ಹಲಸು.. ಹಲಸಿನ ಹಣ್ಣು ನನಗೆ ಕರಡಿಯಂತೆ ಇಷ್ಟ ದಿನವೊಂದಕ್ಕೆ ಮೀಡಿಯಂ ಗಾತ್ರದ ಒಂದು ಹಣ್ಣನ್ನು ಸಲೀಸಾಗಿ ತಿಂದು ಮುಗಿಸುವೆ.ಮನೆಯಲ್ಲಿ ಕೆಲವು ದಿನಗಳ ವರೆಗೆ ಯಾವುದು ತಿನ್ನಲಿ ಯಾವುದು ಬಿಡಲಿ ಎನ್ನುವಂತಿರುತ್ತದೆ..ಆದರೆ ಅಪ್ಪಿ ತಪ್ಪಿಯೂ ಎರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆಕೆಡುವ ಸಾಧ್ಯತೆ ಹೆಚ್ಚಿರುವುದರಿಂದ ಒಂದು ದಿನ ಹಲಸಿನ ದಿನ ಮತ್ತೊಂದು ದಿನ ಮಾವಿನ ದಿನ ಆಚರಣೆಯಂತೆ ಸೇವಿಸಬೇಕು. ಮೊನ್ನೆ ಹಲಸಿನ ಕಡುಬು ಮಾಡಲೆಂದು ಕುಮುದಾ ಸಿದ್ದತೆ ಮಾಡಿದ್ದಳು.. ಹಲಸಿನ ಕಡುಬು ಮಾಡಲು ತೇಗದ ಮರದ ಎಲೆಗಳು ಅವಶ್ಯವಿದ್ದುದರಿಂದ ಮಾಮೂಲಿಯಾಗಿ ಪ್ರತಿ ಬಾರಿಯೂ ತರುತ್ತಿದ್ದ ತೇಗದ ಮರದಿಂದಲೇ ಎಲೆಗಳನ್ನು ಕಿತ್ತು ತಂದೆ. 25% ನಷ್ಟು ನೆನೆಸಿಟ್ಟ ಅಕ್ಕಿ ಮತ್ತು 75% ಹಲಸಿನ ಹಣ್ಣುಗಳನ್ನು ಮತ್ತು ಅಗತ್ಯವಾದರೆ...