ಇನ್ನೂ ಯಾಕೆ ಬದಲಾವಣೆಗಳು ಆಗಿಲ್ಲ???
ಇನ್ನೂ ಯಾಕೆ ಬದಲಾವಣೆ ಆಗಿಲ್ಲ??? ನಿದರ್ಶನ-೧ ನನ್ನ ಕರ್ತವ್ಯದ ಸ್ಥಳ ಗುಡ್ಡಗಾಡು ಪ್ರದೇಶ. ಸೆಪ್ಟಂಬರ್ ನಿಂದ ಡಿಸೆಂಬರ್ ಒಳಗೆ ಯಾವ ಮಡಿಕೇರಿಗೆ ಕಡಿಮೆ ಇರದಂತ ಹಸಿರನಾಡು. ಅದೇ ಮಳೆಗಾಲದಲ್ಲಿ ಹಚ್ಚಹಸುರಿನಿಂದ ನಳನಳಿಸುತ್ತಾ ಕಂಗೊಳಿಸುತ್ತಿದ್ದ ಬೆಟ್ಟಗುಡ್ಡಗಳ ಹುಲ್ಲುಗಾವಲು ಬೇಸಿಗೆಯ ಬಿಸಿಲಿಗೆ ಕಮರಿ ಹೋಗುತ್ತಿತ್ತು. ಈ ಬೆಟ್ಟಗುಡ್ಡಗಳ ವಿಶೇಷ ಏನೆಂದರೇ ವಿರಳಗಿಡ ಮರಗಳು ಇರುವ ಬಂಡೆಗಲ್ಲಗಳೇ ಹೆಚ್ಚಿರುವ ಗುಡ್ಡಗಳು ಅಥವಾ ಯಾವುದೇ ರೀತಿಯ ಮರಗಿಡಗಳಿಲ್ಲದ ಬೋಳು ಬೋಳಾದ ಗುಡ್ಡಗಳು. ಬೇಸಿಗೆಯಲ್ಲಿ ಗುಡ್ಡದಲ್ಲಿ ಒಣಗಿದ ಹುಲ್ಲಿಗೆ ಪ್ರತಿ ವರ್ಷವೂ ಉದ್ದೇಶಪೂರ್ವಕವಾಗಿ ಬೆಂಕಿಹಾಕುವುದು ಇವರಿಗೆ ಶತ ಶತಮಾನದಿಂದ ಬಂದ ಅಭ್ಯಾಸ.!! ಪ್ರತೀ ವರ್ಷವೂ ಅದಕ್ಕಾಗಿಯೇ ಕೆಲವರು ಮೀಸಲಿದ್ದು ಹಗಲೋ ರಾತ್ರಿಯೋ ಅರಣ್ಯ ಕಾವಲುಗಾರರ ಕಣ್ಣು ತಪ್ಪಿಸಿ ಗುಡ್ಡಗಳಿಗೆ ಬೆಂಕಿ ಇಡುತ್ತಿದ್ದರು. ಎರಡ್ಮೂರು ದಿನಗಳು ಉರಿದು ಉರಿದು ಸಾವಿರಾರು ಹೆಕ್ಟರ್ ಭೂ ಪ್ರದೇವನ್ನು ಈ ಬೆಂಕಿಯ ಕೆನ್ನಾಲಿಗೆ ಬೂದಿ ಮಾಡುತ್ತಿತ್ತು. ಇದನ್ನು ಪ್ರತಿ ವರ್ಷವೂ ಗಮನಿಸಿದ್ದ ನಾನು ಒಂದು ದಿನ ನನಗೆ ಪರಿಚಯದ ಅರಣ್ಯ ಕಾವಲುಗಾರರಿಂದ ಪಾರೆಸ್ಟ್ ರೇಂಜರ್ ಅವರ ಮೊಬೈಲ್ ನಂಬರ್ ಪಡೆದು ಈ ಬೆಂಕಿಯ ವಿಷಯವಾಗಿ ಬೀದಿನಾಟಕಗಳು,ಮಾಹಿತಿಸಭೆಗಳು ನಡೆಸುವಂತೆ ಮಾತಾಡಿದೆ.ನನ್ನೊಂದಿಗೆ ಬಹಳ ಗೌರವ...