'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು...
'ಕಿಟ್ಟ' ಎಂಬ ಕೆಲಸವ ನಂಬಿ ಕೆಟ್ಟವರು.. 2015 ನೇ ಸಾಲಿನಲ್ಲಿ ನನ್ನ ಮೊದಲಿದ್ದ ರಾಜಾಪುರ ಶಾಲೆಯಿಂದ ಪಕ್ಕದ ದೊಡ್ಡ ಅಂತಾಪುರದ ಶಾಲೆಗೆ ವರ್ಗಾವಣೆಯನ್ನು ಪಡೆದುಕೊಂಡೆ. ನಮ್ಮದು ಜಿಂದಾಲ್,ಕುಡಿತಿನಿ ಥರ್ಮಲ್ ಪವರ್ ಸ್ಟೇಷನ್ ನಂತಹ ಬೃಹತ್ ಕೈಗಾರಿಕೆಗಳ ಜೊತೆಗೆ ನೂರಾರು ಸಣ್ಣಪುಟ್ಟ ಕೈಗಾರಿಕೆಗಳ ನೆರಹೊರೆಯ ಹಳ್ಳಿಗಳಾದ್ದರಿಂದ ಇಲ್ಲಿನ ಬಹುತೇಕರು ಕೈಗಾರಿಕೆ ಆಧಾರಿತ ಉದ್ಯೋಗ ನಂಬಿ ಬದುಕುತ್ತಿರುವವರು. ನಮ್ಮ ಶಾಲಾ ಮಕ್ಕಳ ಕೆಲ ಪೋಷಕರನ್ನು ಶಾಲೆಗೆ ಮಕ್ಕಳ ಪ್ರಗತಿಯಬಗ್ಗೆ ಚರ್ಚಿಸಲೊ/ಸರ್ಕಾರದ ಯೋಜನೆಗಳನ್ನು ತಲುಪಿಸಲು ಪೋಷಕರನ್ನು ಕರೆಸಿದರೆ ಯಾವಾಗಲೂ ಮಕ್ಕಳದು ಒಂದೇ ಮಾತು ಅದೆಂದರೆ "ಮನೆಯಲ್ಲಿ ಅಪ್ಪ -ಅಮ್ಮ ಯಾರೂ ಇಲ್ಲ ಕಿಟ್ಟದ ಕೆಲಸಕ್ಕೆ ಹೋಗಿದ್ದಾರೆ".ಎಂಬುದು.. ಆಗ ಕೆಲವು ದಿನಗಳವರೆಗೆ ಎಲ್ಲೋ ಕೆಲಸಕ್ಕೆ ಹೋಗಿರುತ್ತಾರೆ ಹೊಟ್ಟೆ ಪಾಡು ನಾಳೆಯೋ ನಾಡಿದ್ದೋ ಬರುತ್ತಾರೆ ಎಂಬ ಆಶಾ ಭಾವನೆ ಇತ್ತಾದರೂ ಕೆಲವು ಪೋಷಕರು ಮಕ್ಕಳ ಬಹುಮುಖ್ಯವಾದ ಎಂದದ್ದೇ ಕೆಲಸ ಇದ್ದರೂ ಆ ತಂದೆ ತಾಯಿಗಳು ಶಾಲೆಗೆ ಶಿಕ್ಷಕರನ್ನು ಕಾಣಲು ಬರಲೇ ಇಲ್ಲ.. ಕೊನೆಗೆ ಮಕ್ಕಳು ಆಗಾಗ್ಗ ಗೈರು ಹಾಜರಿಯಾದಾಗ ಇತರೆ ಮಕ್ಕಳ ಜೊತೆ ಕರೆದುಕೊಂಡು ಮನೆಗೆ ಹೋದರೆ ಅಲ್ಲಿಯೂ ಅವರೂ ಸಿಗಲೇ ಇಲ್ಲ.. ಕೆಲವು ಹಿರಿಯ ಹಳೇ ವಿದ್ಯಾರ್ಥಿಗಳನ್ನೋ ಅಥವಾ ಬೇರೆಯವರನ್ನು ಕೇಳಿದರೆ "ಸಾರ್ ಅವರು ಕಿಟ್ಟಕ್ಕೆ ಹೋಗಿದ್ದಾರೆ ಯಾವಾ...