ಪೋಸ್ಟ್‌ಗಳು

ಆಗಸ್ಟ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೃಷ್ಠಿ -ಹಸಿವು -ಹೆಣ್ಣು..

ಸೃಷ್ಠಿ v/s ಕಾನೂನು... ಮೊನ್ನೆ ನನ್ನ ಮಗಳದೊಂದು ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ ಇತ್ತು. ಎಲ್ಲಾ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹೊರಟ ನಾವು ಹೋಗುವ ರಸ್ತೆಯಲ್ಲೊಂದು ರೈಲ್ವೆ ಟ್ರ್ಯಾಕ್ ದಾಟಿ ಹೋಗಬೇಕಿತ್ತು. ಸುಧಾ ಗೇಟ್ ಫ್ಲೈಓವರ್ ನಿರ್ಮಾಣ ಕಾರ್ಯದ ನಿಮಿತ್ತ ಆ ಗೇಟ್ ನ ವಾಹನ ಸಂಚಾರದ ಭಾರವನ್ನೆಲ್ಲಾ ಒಂದೇ ಗೇಟ್ ನಿರ್ವಹಿಸುತ್ತಿದ್ದುದರಿಂದ ತುಸು ಟ್ರಾಫಿಕ್ ಹೆಚ್ಚೇ ಇತ್ತು. ರೈಲು ಹಾದು ಹೋಗುವವರೆಗೂ ಕಾದು ನಿಂತಿದ್ದ ನಾವು ನನ್ನ ಮುಂದೆ ನಾಲ್ಕೈದು ಬೈಕುಗಳು ಅವುಗಳ ಮುಂದೆ ಟಾಮ್ ಟಾಮ್ ಒಂದರಲ್ಲಿ ಕಂಠದ ಮಟ್ಟ ಕರಬುಜಾ ಹಣ್ಣುಗಳು ತುಂಬಿದ ಗಾಡಿ ಒಂದು ಇತ್ತು. ಬೇಸಿಗೆ ಆದ್ದರಿಂದ ಬೆಳಗಿನ 10 ಗಂಟೆಯ ಬಿಸಿಲು ಸಾಧಾರಣವೇನೂ ಇರಲಿಲ್ಲ. ಸರಿಯಾಗಿಯೇ ಇತ್ತು. ಉದ್ದನೆಯ ಗೂಡ್ಸ್ ಗಾಡಿಯೊಂದು ಪಾಸ್ ಆದಮೇಲೆ ವಾಹನಗಳಿಂದ ಶಬ್ದಮಾಲಿನ್ಯ ವಾಯು ಮಾಲಿನ್ಯ ಅಧಿಕವಾಯಿತು. ಯಾವುದೇ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಅಡ್ಡಾ ದಿಡ್ಡಿ ವಾಹನಗಳನ್ನು ಚಾಲನೆ ಮಾಡುವವರು ಬಳ್ಳಾರಿಯಲ್ಲಿ  ಅಂತವರೇ ಹೆಚ್ಚಾಗಿ ಕಾಣ ಸಿಗುವ,  ಸರಿಯಾಗಿ ಹೋಗುವವನೇ ಸರಿ ಇಲ್ಲವೇನೋ ಎಂಬಂತೆ ಯಾವಾಗಲೂ ಅನಿಸುತ್ತಿರುತ್ತದೆ.ಯರ್ರಾಬಿರ್ರಿ ಹೋಗುತ್ತಿದ್ದ ಬರುತಿದ್ದ ವಾಹನಗಳ ಮದ್ಯೇ ಮುಂದೆ ಸಾಗುತ್ತಿರುವಾಗ ಮುಂದಿದ್ದ ಕರಭುಜಾ ಹಣ್ಣಿನ ಗಾಡಿಯಿಂದ ಒಂದು ಹಣ್ಣು ಬಿತ್ತು. ಆ ಟಾಮ್ ಟಾಮ್ ಅವನಿಗೆ ಹಣ್ಣು ಬಿದ್ದದ್ದು ಗೊತ್ತಾಗಲಿಲ್ಲ ಅನಿಸುತ್ತೆ ಅವನು ವಾಹನ ದಟ್ಟಣೆ ಕಡಿಮ...

ಸ್ವಾತಂತ್ರ ಇದ್ದರೂ ಬದುಕು ಅತಂತ್ರ...

ಇಮೇಜ್
*#ಸ್ವಾತಂತ್ರ್ಯ_ಬಂದರೂ_ಬದುಕು_ಅತಂತ್ರ...* Nagendra Banjagere   *ದಾಸ್ಯಕ್ಕೆ ತೆರಿಗೆಯ ತೇದು ಗ್ಯರಸೆ ಗ್ಯರಸೆ  ದಿನಸೀ ಧಾನ್ಯ ಬೆಳೆದ ಅನ್ನದಾತ ಅಂದು  ತಲೆಯಲ್ಲಿ ಅಕ್ಷರವಿರಲಿಲ್ಲ ಎದೆಯಲ್ಲಿ ಅಕ್ಕರೆಯಿತ್ತು ಸಕಲ ಜೀವಿಗಳಲ್ಲಿ...* *ಜವಾರಿ ಬೆಳೆದು ತಿಂದುಂಡ ಜನರ ಜೀವ  ಗುಂಡ್ಕಲ್ಲು.. ಗುಡಿಸಲಾದರೂ ಜೋಪಡಿಯಾದರೂ ಚಳಿ ಮಳೆ ಸಿಡಿಲಿಗೆ  ಬೆದರದೆ...* *ಸ್ವದೇಶಿಗಳೇಕೆ ತೆರಬೇಕು  ಪರದೇಶಿಯರಿಗೆ ತೆರಿಗೆ??ದಂಗೆದ್ದರು  ಒಟ್ಟಾದರು ಇಷ್ಟಾದರೂ ಪರದೇಶಿಗಳ ಸ್ವದೇಶದಿ ಓಡಿಸಿ ತಿರಂಗವ ಹಾರಿಸಿ ಜನಗಣಮನ ಹಾಡಿ..ಅಖಂಡ ದೇಶವು ಮೂರಾಗಿ ಇಬ್ಬಾಗಿಸಿ..* *ಭಾರತಮಾತೆ ಹೆಣ್ಣು..ಆದಿವಕಾಲದಿಂದಲೂ ಸ್ವಾತಂತ್ರ ಕಸಿದ ಜನ ಸ್ವತಂತ್ರ ಸಿಕ್ಕ ಮೇಲೂ  ಸ್ವಾತಂತ್ರ್ಯ ಕೊಡದೆ ಜನಗಣಮನ ಹೇಳುವ ಜನಮನ...* *ಅನ್ನದಾತನ ಬೆಳೆಗೆ ಬೆಲೆ ಇಲ್ಲದಾಯ್ತು ಅನ್ನವಿಲ್ಲದಂತಾಯ್ತು... ರಾಜಕಾರಣಿಗಳು ಅನ್ನ ರಾಜನಿಗೆ ಬೀಜದ ಹೆಸರಲ್ಲಿ ಅರೆ ಜೀವ.. ಕೀಟನಾಶಕದಿ ಪೂರ ಜೀವವ ತೆಗೆದು ತರಾವರಿ ತೆರಿಗೆಯ ಬರೆ ಹಾಕಿ ಬೀದಿಗೆ ನೇತಾಕಿದರು ಅವನ...* *ಶ್ರಮಿಕರ ರಕ್ತ ಬೆವರು ಹೀರಿ ಸಂಪಾದಿಸಿದ ಧನಿಕನ ಮನೆಯ ಮೇಲೆ ತಿರಂಗ ಧರ್ಪದಿ ನಗುತ್ತಿದ್ದರೆ ತಿರುಕನ ಮನೆಯ ತಿರಂಗ ಸ್ವಾತಂತ್ರ್ಯದ ಸಂಕೇತವಾದರೂ ನಿಂದೇನೂ ನಡೆಯದೆಂಬಂತಿತ್ತು...* Happy Independence day... ✍️ *ನಾಗೇಂದ್ರ ಬಂಜಗೆರೆ.*

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..

ಇಮೇಜ್
ನಾ ಕಂಡ ಸಂಗನಕಲ್ಲು.... ಒಂದೆರಡು ದಿನಗಳಿಂದ ಬಳ್ಳಾರಿಯಲ್ಲಿ ಸ್ವಲ್ಪ ಮಳೆ. ಮಳೆ ಎಂದರೇ ಬಿಟ್ಟು ಬಿಡದೇ ಸುರಿಯುವುದಲ್ಲ ಬದಲಾಗಿ ಬರೀ ಬಿಸಿಲು ಗಾಳಿಯಲ್ಲದ ದಿನಕೊಮ್ಮೆಯೋ ಎರಡು ಬಾರಿಯೋ  ಹತ್ತಿಪ್ಪತ್ತು ನಿಮಿಷ ಬಂದೋಗುವ ಸಾಧಾರಣ ಮಳೆ.. ನಮ್ಮ್ ಉಡುಪಿ ಮಂಗಳೂರಿಂನಂತಹ ಕರಾವಳಿ ಭಾಗದಲ್ಲಿ ಎಷ್ಟು ಮಳೆ ಸುರಿದರೂ ಮಳೆ ನಿಂತ ಮರು ಕ್ಷಣ ಮಳೆಯೇ ಬಂದಿಲ್ಲದಂತಹ ಉರಿ ನಮ್ಮ ಬಯಲು ಸೀಮೆಕಡೆ ಇರುವುದಿಲ್ಲ... ಒಮ್ಮೆ ಮಳೆ ಸುರಿದರೆ ಮೂರು ನಾಲ್ಕು ದಿನ ಕೆಸರು  ತಂಪು ಇದ್ದೇ ಇರುತ್ತದೆ. ನಾಳೆ ಸಂಡೇ ಎಲ್ಲಿಗಾದರೂ ಹೋಗೋಣ ಎಂದು ಯೋಚನೆ ಮಾಡಿದಾಗ ನೆನಪಾಗಿದ್ದು ಬಳ್ಳಾರಿಯ ಸಂಗನಕಲ್ಲು. ಹೆಗಲಿಗೆ ಕ್ಯಾಮೆರಾ ಹಾಕಿ, ಗಾಡಿ ಹತ್ತಿ ಹೋಗಿ ಇಳಿದದ್ದು ಸಂಗನಕಲ್ಲಿನ ತಪ್ಪಲಿನಲ್ಲಿ.    ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿಯ ಪರಿಣಾಮದಿಂದ   ನಿರ್ಮಾಣವಾದ  spike ಬೆಟ್ಟವೇ ಈ ಸಂಗನಕಲ್ಲುಗಳ ರಾಶಿ. ಜ್ವಾಲಾಮುಖಿಯಾಗಿ ಗುಡ್ಡ ರಚನೆಯಾದ ಕಾಲದಲ್ಲಿ    ಭೂಮಿಯ ಅಂತರಾಳದಲ್ಲಿ(Mantal) ಸುಮಾರು 70 ಕಿಲೋ ಮೀಟರ್ ಆಳದಲ್ಲಿ ಉದುಗಿದ್ದ ಆಲಿವಿನ್ ಡಯಾಬೇಸ್ ಅಥವಾ ಆಲಿವಿನ್ ಬಸಾಲ್ಟ್  ಕಲ್ಲಿನ ರಾಶಿ ಮ್ಯಾಂಟಲ್ ನಲ್ಲಿನ ಕೆಲವು  ಅಡಚಣೆಗಳಿಂದಾಗಿ ಭೂಮಿಯ ಮೇಲ್ಮೈ ಮೇಲೆ ಬರುತ್ತವೆ. ಜ್ವಾಲಾಮುಖಿ ಸ್ವರೂಪದ ಗಟ್ಟಿಹುಂಡೆಗಳಂತಹ ಕಲ್ಲುಗಳನ್ನ ಈಗಲೂ ಕೂಡ ನಾವು ಅಲ್ಲಿ ಕಾಣಬ...