ಮಳೆ..ಮಳೆ..ಮಳೆ..

#ಮಳೆ..#ಮಳೆ..#ಮಳೆ..

ಮಳೆಯೋ ನೀನು ಅಸವಲ್ಲದ ಮಳೆಯಾಗಿಹೆ ಇತ್ತೀಚೆಗೆ..ಹವಾಮಾನ ಸುದ್ದೀ ಕೊಟ್ಟವರಿಗೂ ಅಳತೆಗೂ ಸಿಗದಷ್ಟು ಸುರಿದು ಅವಮಾನ ಮಾಡಿಬಿಟ್ಟೆ..

ಶತಕಗಳಿಂದಲೂ ತುಂಬದ ಕೆರೆ ಬಾವಿಗಳನು ಒಡೆದು ಹೋಗುವಷ್ಟು ತುಂಬಿಸಿ ಮನೆ ಮನೆಗಳಿಗೂ ನುಗ್ಗಿ ನಿನ್ನ ಸ್ಥಳವ ಆಕ್ರಮಿಸಿ.

ಅಷ್ಟದಿಕ್ಕುಗಳಲಿ ಹಬ್ಬಿ  ನಮ್ಮೂರು ನಿಮ್ಮೂರು ಆ ಊರು ಈ ಊರು ಯಾವ ಊರು ಬಿಡದೆ ಬಿಟ್ಟು ಬಿಡದೆ ಸುರಿದೆ..

 ಮಳೆಯ ನಂಬಿ ಇಳೆಯ ನಂಬಿ ಬೀಜ ಬಿತ್ತಿರಲು ಬೆಳೆಗಳು ಬತ್ತದಂತಿರುವಂತೆ ಬಾರೋ ಮಳೆಯೇ ಎಂದರೆ ಬೆಳೆಯೇ ಕೊಚ್ಚಿ ಹೋಗುವಂತೆ ಸುರಿದಿಹೆಯಲ್ಲ..

ರಾಯಚೂರು ಬಳ್ಳಾರಿ ಈ ಊರುಗಳು ನೀನ್ ಬರುವ ಮುನ್ನ ಆಗಿದ್ದವು  ಬಿಸಿಲೂರು..ಈಗಾಗಿವೇ ನೀರೂರುಗಳು..

ಸುರಿಯಲು ನಿನಗೆ ಸುಖವೆನಿಸಿ  ಮುಂಬರುವ ಮೂರುವರ್ಷದ ಮಳೆಯ ಈಗಲೇ ಸುರಿಸಿ  ಮುಂದಿನ ವರ್ಷ ವರುಷಬಾರದೇ ಬರವ ತರಿಸಿ ಅನ್ನದಾತರ ಕಣ್ಣಲ್ಲಿ ಕಣ್ಣೀರು ಸುರಿಸದಿರು  ಓ ಮಳೆರಾಯ..

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..