ಪೋಸ್ಟ್‌ಗಳು

ಫೆಬ್ರವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನಸಿನ ಪಯಣ..part-3

ಕನಸಿನ ಪಯಣ.. (The journey in  the Dream) (ಕನಸಿನ ಕಥಾ ಸರಣಿ )         part-3  ಅದು ಶನಿವಾರ ರಾತ್ರಿ.. ನೆಡ್ರಿ  ಊರಿಗೆ ಹೋಗದ ಬಹಳ ದಿನಗಳಾಯಿತು.. ಊರಿಗಾದರೂ ಹೋಗಿಬರೋಣ ಎಂದಳು ಆರೋಹಿ.. ಆರುಷಿ: ಸರಿ ಬೆಳಿಗ್ಗೆ ಆರು ಗಂಟೆ ಒಳಗಡೆ ಮನೆ ಬಿಟ್ಟು ರಸ್ತೆಯಲ್ಲಿರಬೇಕು..ಬೇಗ ರೆಡಿ ಅಗಬೇಕು, ಕಡಿಮೆ ಲಗೇಜ್ ಪ್ಯಾಕ್ ಮಾಡಬೇಕು ಎಂದು ಸಮ್ಮತಿ ಸೂಚಿಸಿದ..  ಬಳ್ಳಾರಿ ನಗರದಿಂದ ಆರುಷಿಯ ಊರು ನೂರು ಕಿಮೀ.. ಬಳ್ಳಾರಿ ಹೊರ ವಲಯದ ಹೀರೆಹಾಳ್ ಗೆ ಬಂದ ಮೇಲೆ ಯಾಕೋ ಸಿಂಗಲ್ ನೇಚರ್ ಕಾಲ್ ಆರುಷಿಯನ್ನು ಒತ್ತಡಕ್ಕೀಡು ಮಾಡಿದ್ದರಿಂದ   ಹೈವೇಯ ನರ್ಸರಿಗಳ ಪಕ್ಕದಲ್ಲಿಯೇ ಕಾರು ನಿಲ್ಲಿಸಿ  ಕೆಳಗಿಳಿದು ಆನಂದಿಸುತ್ತಿಅ ಅಕ್ಕ-ಪಕ್ಕ ನೋಡಿದಾಗ ಒಂದು ಪಪ್ಪಾಯಿ ಗಿಡದಲ್ಲಿ  ಎರಡ್ಮೂರು ಕಾಯಿಗಳು.. ಗಿಡ ಬಾಡಿ ಹೋಗಿದೆ ಅದರಲ್ಲಿ ಒಂದು  ಸಾಧರಣ ತೆಂಗಿನ ಕಾಯಿ ಗಾತ್ರದ ಒಂದು ಹಣ್ಣು ಹಣ್ಣಾಗಿತ್ತು. ಆರುಷಿಯು ಕೈ ಎತ್ತಿದರೂ ನಿಲುಕದ ಎತ್ತರದಲ್ಲಿ ಇದ್ದುದರಿಂದ ಅಲ್ಲೇ  ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದೆರಡು ಮೊಳ ಉದ್ದದ  ಕೋಲಿನಿಂದ  ಆ ಹಣ್ಣನ್ನು ಕೆಡವಿ ಕ್ಯಾಚ್ ಹಿಡಿದು full  ಹಣ್ಣಾಗಿದ್ದುದರಿಂದ  ಸ್ಥಳದಲ್ಲೇ ಕೈಯಿಂದ ಅದುಮಿ ಓಪನ್ ಮಾಡಿದ. ಆರೋಹಿ ಕಾರಿನಿಂದ ನೋಡು ನೋಡುತ್ತಲೇ ಬಾಯಿಗೆ ಹಾಕಿ ತಿನ್ನುತ್ತಾ ಕಾರಿನ ಬಳಿಗೆ ಬಂದ. ಆರೋಹಿ: ...

ನೀನ್ ಜೊತೆಗೆ ನನ್ನ ಇನ್ಮೇಲೆ ಎಲ್ಲೂ ಕರೀಬೇಡಯ್ಯ

ಇಮೇಜ್
#ನೀನ್_ನನ್ನ_ಇನ್ಮೇಲೆ_ಎಲ್ಲೂ_ಕರೀಬೇಡಯ್ಯ_ನಾನು_ನಿನ್ನ_ಜೊತೆಗೆ_ಬರಲ್ಲ_ ದೀಕ್ಷಿತ್  ಕೋಟೆನಾಡು ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಶಿಕ್ಷಕನಾಗಲು ಡಿ .ಇಡಿ ಮಾಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದ. ಊರಿಗೆ ಹೋಗುವಾಗ ಬಸ್ಸಲ್ಲಿ ಆಕಸ್ಮಿಕವಾಗಿ ಕಂಡ ಕ್ಲಾಸ್ ಮೇಟ್ ಅಕ್ಷತಾಳೊಂದಿಗೆ ಮಾತನಾಡುವಾಗ ನಾನು ಡಿ ಇಡಿ ಅಪ್ಲಿಕೇಶನ್ ಹಾಕಿದ್ದೇನೆ ಎಂದು ಹೇಳಿದ್ದಳು.ದೀಕ್ಷಿತ್ ಮತ್ತು ಅಕ್ಷತಾ ಪ್ರೈಮರಿ ಕ್ಲಾಸ್ಮೇಟ್ಸ್ ಆದರೂ ಹೈಸ್ಕೂಲ್ ಪಿಯೂ ಬೇರೆ ಬೇರೆ ಕಡೆ ಮುಗಿಸಿದ್ದರು. ಪ್ರೈಮರಿ ನಂತರ  ಅವರಿಬ್ಬರೂ ಎಂದು ಬೇಟಿಯಾಗಲೇ ಇಲ್ಲ.. ಅಂದು ಬಸ್ಸಿನಲ್ಲಿ ಬೇಟಿಯಾಗಿದ್ದೇ ಪಸ್ಟ್ ಟೈಂ.. ಬಹಳದಿನಗಳ ನಂತರ ಪರಸ್ಪರ ಮಾತನಾಡಿದ ಇಬ್ಬರೂ  ಏನು ಮಾಡುತ್ತಿದ್ದೀಯಾ ಅಕ್ಷತಾ ಎಂಬ ಪ್ರಶ್ನೆಗೆ ಡಿ ಇಡಿ ಮಾಡಬೇಕು ಅಂತ ಇದ್ದೀನಿ ಅಪ್ಲಿಕೇಶನ್ ಹಾಕಿದ್ದೇನೆ ಎಂದಳು.ನಾನು ಡಿ ಇಡಿ ಗೆ ಹಾಕಿದ್ದೇನೆ ಸೆಲೆಕ್ಷನ್ ಲಿಸ್ಟ್ ಯಾವಾಗ ಬಿಡುತ್ತಾರೋ ನೋಡಬೇಕು ಎಂದು ಮಾತನಾಡುತ್ತಾ ಬಂದೆವು.    ಒಂದು ತಿಂಗಳಾಗಿರಬಹುದು. ಅಕ್ಷತಾ ಚಳ್ಳಕೆರೆ ನಗರದ ಡಿ ಇಡಿ ಕಾಲೇಜಿಗೆ ಅಡ್ಮೀಷನ್ ಆಗಿ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದು ತಿಳಿಯಿತು. First ಲಿಸ್ಟಲ್ಲಿ ನನ್ನದು ಸೆಲೆಕ್ಷನ್ ಆಗಿರಲಿಲ್ಲ. ಆದರೆ ಅಕ್ಷತಾ ಪೇಮೆಂಟ್ ಕಟ್ಟಿ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದಳು. ಎರಡು ಮೂರನೇ ಲಿಸ್ಟ್ ಗೆ ಕಾಯುತ್ತಿದ್ದ ನಾನು ಡಿ ಇಡಿ ಹೇಗಿರುತ್ತದೆಂಬ ಕುತೂಹಲದಿಂದ ಮತ್...

CRIME IN DREAM part-2

ಇಮೇಜ್
CRIME IN DREAM.. (ಕನಸಿನ ಕ್ರೈಮ್ ಕಥಾ ಸರಣಿ...) part-2 ಕಳೆದ ತಿಂಗಳು ತೆರೆಕಂಡ  tallywood ಚಿತ್ರ 'ಪುಷ್ಪ' ಚಿತ್ರದ ಬಗ್ಗೆ ಕೇಳಿರಬಹುದು. ಆದರೆ ಆಹಾ ಅಂತೀಯಾ ಮಾಮ .. ಹ್ಞೂ ಹ್ಞೂ ಅಂತಿಯಾ.. ಎಂಬ song ಅನ್ನು ಖಂಡಿತಾವಾಗಿಯೂ ನಿಮ್ಮ ಕಿವಿಗೆ ಬಿದ್ದೇ ಬಿದ್ದಿರುತ್ತದೆ..ಆ ಚಿತ್ರದಲ್ಲಿ ನಾಯಕ 'ರಕ್ತ ಚಂದನದ' illegal ಸ್ಮಗ್ಲರ್ ಆಗಿ,ಚಂದನವನದ ಗೊಂಬೆಯ ಜೊತೆಗೆ ರೋಮ್ಯಾನ್ಸ್ ಮಾಡುವ ಮೂಲಕ ಯಶಸ್ವಿಯಾಗಿ ಬೆಳೆಯುವಂತೆ ಇಲ್ಲೊಂದು ಗಂಧದ ಕಳ್ಳರ ಗ್ಯಾಂಗ್ ಮಾಡಿದ. ಖತರ್ನಾಕ್ ಕಳ್ಳತನದ ಬಗ್ಗೆ ನೀವು ಓದಲೇ ಬೇಕು.. ಆರುಷಿ ಮೊಬೈಲ್ ಹಿಡಿದು Sathish udpi ಎಂಬ ಕಾಂಟ್ಯಾಕ್ಟ್ search ಮಾಡಿ ಡಯಲ್ ಮಾಡಿದ... ಅಣ್ಣಾ ನನ್ನ ಊರು..ಅಣ್ಣಾ ನನ್ನ ಹೆಸರು..'ಎಂಬ ಕಾಲರ್ ಟ್ಯೂನ್ ಬರುತ್ತಿದೆ.. Long ring ಆಯಿತು ಆದರೂ  ಸತೀಶ ಪೋನ್ ತೆಗೆಯಲಿಲ್ಲ.. ಮತ್ತೊಮ್ಮೆ ಮಾಡಿದರೂ ಆಗಲೂ ತೆಗೆಯಲಿಲ್ಲ..! ಏನೋ ಬ್ಯೂಸಿ ಇರಬೇಕು ಇಲ್ಲ ಬೈಕಲ್ಲೋ ಕಾರಲ್ಲೊ ಇರಬೇಕು ನೋಡೋಣ  ಆಮೇಲೆ ಮಾಡುವ  ಎಂದು  ಸುಮ್ಮನಾದ.. ಒಂದೈದು ನಿಮಿಷದ ನಂತರ ಸತೀಶನೇ ಆರುಷಿಯ ಮೊಬೈಲ್ ಗೆ ಕರೆ ಮಾಡಿದ..ಕರೆ ಸ್ವೀಕರಿಸಿದ ತಕ್ಷಣ ನಮಸ್ತೇ ಮಾರಾಯ್ರೆ...ಹೊರ್ಗಡೆ ಚೂರ್ ಕೆಲ್ಸ ಇತ್ ಮಾರ್ಎ.. ಪೋನ್  ಒಳ್ಗಿತ್ತು ..ಹೇಳಿ ಹೇಳಿ ಹೇಗಿದ್ದೀರಿ?? ಆರುಷಿ:ನಾವು ಚೆಂದ ಇದ್ದೇವೆ.. ನೀವು?? ಸತೀಶ:ನಾವು ಆರೋಗ್ಯ ವಾಗಿ ಇದ್ದೇವೆ... ಆರುಷಿ...

CRIME IN DREAM...

ಇಮೇಜ್
CRIME  in DREAM  ಕನಸಿನ ಪಯಣ        Part-1  ಅವನು ಅಮೈರ.. IPS ಮಾಡಬೇಕು ಅನ್ನುವುದು ಅವನ ಕನಸು. ಅದಕ್ಕೆ ಬೇಕಾದ ಜ್ಞಾನ ,ದೈಹಿಕ ಮತ್ತು ಮಾನಸಿಕವಾಗಿ ಸಿದ್ದವಾಗಿದ್ದ. He is also intellectual!  ಶಂಕಿತ/ಲಕ್ಷಣಗಳು ಹೇಳಿದರೆ ಕರಾರುವಕ್ಕಾದ ಸ್ಕೆಚ್ ಹಾಕುವ ಕಲೆಯೂ ತಿಳಿದಿತ್ತು. ಹೀಗೆ ಸಕಲ ಸಿದ್ದತೆ ಮಾಡಿಕೊಂಡಿದ್ದ. ಪ್ರತಿದಿನ ಕನಿಷ್ಠ ಎಂಟತ್ತು ಗಂಟೆಗಳ  ಅಭ್ಯಾಸ ಮತ್ತು ಒಂದೆರೆಡು ಗಂಟೆಗಳ ದೈಹಿಕ ಕಸರತ್ತು ಪ್ರತಿದಿನ ನಿತ್ಯಕಾಯಕ ಆಗಿತ್ತು.ರಾಜಸ್ಥಾನದ ಜೈಪುರದಲ್ಲಿ ಸೂರ್ಯೋದಯ ನೋಡಲು ಚೆಂದ ಎಂದು ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಆಕಸ್ಮಿಕವಾಗಿ ಜೈಪುರಕ್ಕೆ  ಹೋದಾಗ ಇಂದು ಸನ್ ರೈಸ್ ನೋಡಲೇಬೇಕೆಂದು ಕೋಟೆಗಳ ನಾಡು,ಎಲ್ಲಿನೋಡಿದರೂ ಕೆಂಪು ಬಣ್ಣದ ಕಟ್ಟಡಗಳ ಮಧ್ಯೆ ಇದ್ದ   watching ಟವರ್ ಹುಡುಕಿಕೊಂಡು ಹೊರಟ.. ಅದು ಸಿಟಿ ಮಧ್ಯದಲ್ಲಿರುವ ವೀಕ್ಷಣಾ ಗೋಪುರ.‌ ‍ದೊಡ್ಡ ಛತ್ರಿಯಾಕಾರದ ಮೇಲೆ ಮತ್ತೊಂದು   ಸಣ್ಣ ಛತ್ರಿ.. ಎರಡರ ಮೇಲೂ ಪ್ರವಾಸಿಗರು ನಿಂತು ನೋಡಲು ಅವಕಾಶ ಇದ್ದ ಮಲ್ಟಿ ಲೆವೆಲ್ watching tower. ಅದು ನಗರದ ಕೇಂದ್ರ ಭಾಗ,ನಾಲ್ಕಾರು ಪ್ರಮುಖ ರಸ್ತೆಗಳು ಸೇರುವಂತಹ ಪ್ರಧಾನ ರಸ್ತೆ..ರಸ್ತೆಯಲ್ಲಿ ಹಾಲು ಹಾಕುವವರು, ರಿಕ್ಷಾಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದವರು ಮತ್ತು ಅಲ್ಲೊಬ್ಬ ಇಲ್ಲೊಬ್ಬ ರಸ್ತೆ ಸ್ವಚ್ಚತಾ ಕಾರ್ಯ ಮ...

ಕಲಿಯುಗದ ಕೌರವರು..

ಇಮೇಜ್
ಜಾತ್ಯಾತೀತ ರಾಷ್ಟ್ರದ ರಾಜಕಾರಣಿಗಳಿಗೆ ಜಾತೀಯೇ ಮುಖ್ಯ.. ಉಳಿದೆಲ್ಲವೂ ಅಮುಖ್ಯ ತಮ್ಮ ಅಸ್ತಿತ್ವಕ್ಕೆ  ಉಟ್ಟಬಟ್ಟೆಯೇ ಬೇಕಿತ್ತು.. ಗತಿಸಿದೆರಡು ವರ್ಷ ಕಲಿತದ್ದು ಸೊನ್ನೆ..  ಕಲಿಯುವ ಹೊಸ್ತಿಲಲ್ಲಿ ಇರುವಾಗ ಬೀಸಿದೆ ವಸ್ತ್ರದ ವಿವಾದ.. ಕಿರಾತಕರ ಸಂಚಿಗೆ ಕಲಿತು ಬೆಳೆಯಬೇಕಾದ ವಿದ್ಯಾಲಯದಲ್ಲಿ ಕಲಿಯುತಿಹರು ಜಾತೀಯತೆ, ಬೇದ-ಭಾವ, ಅನೇಕತೆ, ವೈಷಮ್ಯ,ದುಷ್ಕೃತ್ಯದ ಪರಿ ಹೇಗೆಂದು.. ಹೆತ್ತವರು ಕನಸು ಕಾಣಿತಿಹರು  ನಮ್ಮ ಕುಡಿಗಳು ಕಲಿತು ಕಟ್ಟೆಹಾಕುತಿಹರೆಂದು.. ಪಾಪ ಅವರಿಗೆ ತಿಳಿದಿಲ್ಲ ಕಿಡಿಗೇಡಿಗಳ ಬಿರ್ಯಾನಿ ಪುಡಿಗಾಸಿಗೆ ಜೀವನ ಕಮರೀತೆಂದು.. ಮಾನ ಮುಚ್ಚಬೇಕಾದ ವಸ್ತ್ರ  ಧರ್ಮ ಜಾತಿಯ ಅಸ್ತ್ರವಾಗಿ ಭಿಕರಿಯಾಗಿಹವು ಧರ್ಮಕ್ಕೊಂದು ಬಣ್ಣ ಜಾತಿಗೊಂದು ವಸ್ತ್ರ... ಮತೀಯ  ತಿಳಿಗೇಡಿಗಳಿಗೆ ಅದುವೇ ಅಸ್ತ್ರ. ಕೌರವರಿಗೆ ವಸ್ತ್ರ ಅಪಹರಣವೇ ಅಸ್ತ್ರ ಕಲಿಯುಗದ ಕೌರವರಿಗೂ ವಸ್ತ್ರ ವೇ ಅಸ್ತ್ರ..  ಓ ವಸ್ತ್ರ ವೇ  ದೇಶದ ಮಾನ ಮೂರಾಬಟ್ಟೆಯಾಗದಂತೆ ಕಾಪಾಡು.. ✍️ನಾಗೇಂದ್ರ ಬಂಜಗೆರೆ.

ಹಿಟ್ಟಿನ ಗಿರಣಿಯಲ್ಲಿ ರಾಗಿಯನ್ನು ಮಧ್ಯದಲ್ಲಿ ಹಾಕುವುದಿಲ್ಲ ಯಾಕೆ???

ಇಮೇಜ್
ಹಿಟ್ಟಿನ ಗಿರಣಿಯಲ್ಲಿ ರಾಗಿಯನ್ನು ಮಧ್ಯ ಹಾಕುವುದಿಲ್ಲ ಯಾಕೆ?? ಮೊನ್ನೆ ನಾನು ರಾಗಿ ತೆಗೆದುಕೊಂಡು ನಮ್ಮ ಮನೆಯ ಸಮೀಪ ಇರುವ ಪ್ಲೋರ್ ಮಿಲ್ ಗೆ ಹೋಗಿದ್ದೆ..ರಾಗಿ  ಅಲ್ಲವಾ  ಸಾರ್... ಲೇಟ್ ಆಗತ್ತೆ ಏಳು ಮುಕ್ಕಾಲು-ಎಂಟು ಗಂಟೆಯಂಗೆ ಬನ್ನಿ ಎಂದೇಳಿದ.. ಸರಿ ಎಂದು ಬಾಕ್ಸ್ ಇಟ್ಟು ಮನೆಗೆ ಬಂದು ಸರಿಯಾಗಿ ಏಳು ಮುಕ್ಕಾಲಿಗೆ ಹೋದೆ.. ಆ ಪ್ಲೋರ್ ಮಿಲ್ ಹುಡುಗ ಇನ್ನೂ ಅಕ್ಕಿ ಗೋಧಿಗಳನ್ನೇ ರುಬ್ಬುತ್ತಿದ್ದ.. ಏನಪ್ಪ ಆಗಿಲ್ಲ...?? ಆಯ್ತು ಸಾ..ಇನ್ನೇರಡು ಇದ್ದಾವೆ.. ಒಂದೈದು ನಿಮಿಷ ಅಂದ... ಕೈಗೆ ಮೊಬೈಲ್ ತೆಗೆದು ಬೈಕಿಗೆ ಆನಿಕೊಂಡು  ಒಂಟಿ ಕಾಲಲ್ಲಿ ಹಾಗೆ ನಿಂತೆ.. ಒಬ್ಬ ನಲವತ್ತು- ನಲವತ್ತೆರಡು ವಯಸ್ಸಿನ ಪುರುಷನೊಬ್ಬ  ಮೂರುದಿನದಿಂದ ಮನೆಯಾಕೆ ಹಿಟ್ಟು ಮಾಡಸ್ಕೊಂಡ್ ಬಾ ಅಂತ ಹೇಳಿ ಇವ ಹ್ಞು ಹ್ಞು ಅಂತ ಅನ್ಕೊಂಡ್  ಹಿಟ್ಟು ಮಾಡಿಸದೇ ಪೈನಲ್  ಆಗಿ  ನೀ ಏನ್ ಹಾಕಿಸ್ಕೊಂಡ್ ಬರುವೆಯಾ ಇಲ್ಲಾ ಉಪವಾಸ ಹಾಕ್ಲ ??ಎಂದು  ಮನೆಯಾಕೆ ಜೋರು ಮಾಡಿದ ಮೇಲೆ ಅವಸರವಸರ ವಾಗಿ ಬಕೇಟ್ ಹಿಡಿದು ಬಂದಂತಿತ್ತು. ಬಂದವನೇ ಬಕೇಟ್ ಕೆಳಗಿಟ್ಟು ಹಿಟ್ಟು ಮಾಡಿಸದೇ ಇರುವ ಎಲ್ಲಾ ಡಬ್ಬಗಳನ್ನು ಅದೇನು ಇದೇನು ಎಂಬಂತೆ ದಡ ದಡ ಚೆಕ್ ಮಾಡುತ್ತಾ ಇದ್ದ.. "ಜ್ವಾಳ ಗೋಧಿ ಯಾವಿಲ್ಲಲ್ಲೋ ತಮ್ಮ??" "ಯಾ ಇಲ್ಲ..ಈ ಸಾರ್ ದು ಆದ ಮೇಲೆ ನಿಮ್ಮದು.." ನೀವ್ ಈಗ ಬಂದೀರಿ.. ಹೌದಾ?? ರಾಗಿ ಹಾಕ್ಬಿಡುತ್ತೀಯಾ?? ಹ್ಞು.. ...

ಅಟ್ಟಹಾಸ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ...

ಇಮೇಜ್
'ಅಟ್ಟಹಾಸ'  ಫಿಲಂ ಟೈಟಲ್ ಕೊಟ್ಟಿದ್ದು ನಾನೇ...  *ಈ ಟೈಟಲ್ ಓದಿದ ಮೇಲೆ ಬಹುಶಃ  ನಿಮ್ಮ ಮುಖದಲ್ಲೊಂದು ದ್ವಂದ್ವ ಅರ್ಥಕೊಡುವ ನಗು ಬಂದೋಗಿರಬಹುದು. ಅದು ನೀನ್ ಯ್ಯಾವಾಗ ಈ ಫಿಲಂಗೆ ಹೆಸರು ಕೊಟ್ಟಿದ್ದೆ ಅಂತಾದ್ರೂ ಇರಬಹುದು..ಅಥವಾ ಹೌದಾ? ನೀನಾ ಈ ಹೆಸರು ಕೊಟ್ಟಿದ್ದು?? ಅಂತಾದ್ರೂ ಇರಬಹುದು.. ಹೌದು. ಈ ವೀರಪ್ಪನ್ ವಿಷಯಾಧಾರಿತ 'ಅಟ್ಟಹಾಸ' ಕನ್ನಡ ಚಲನಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ನಾಗೇಂದ್ರ ಬಂಜಗೆರೆ.  ಆದರೆ ದುರಾದೃಷ್ಟವಶಾತ್  ಆ ಚಿತ್ರತಂಡ ನನ್ನ ಹೆಸರು ಎಲ್ಲೂ ಪ್ರಸ್ತಾಪ ಮಾಡಿಲ್ಲ!.ಹಾಗಾದರೆ ನೀನು ಅಂತ ಈಗ ಹೇಳಿದರೆ ಒಪ್ಪಕ್ಕಾಗತ್ತಾ??ಅಂತ ನೀವು ಕೇಳಬಹುದು.* *2007 ನೇ ಇಸವಿಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ  ಡಿ ಎಡ್ ಮುಗಿಸಿ  ಕೆಲದಿನಗಳು practice teaching  ಡಿ ಇಡಿ ,ಬಿ ಇಡಿ ಹುಡುಗರಿಗೆ tlms ,paintings  ಬರೆದುಕೊಡುತ್ತಿದ್ದೆ. ಅದರಲ್ಲೇ ನನ್ನ ಜೀವನ.. ಪ್ರತೀದಿನ ಆರ್ಡರ್ ಇರುತ್ತಿರಲಿಲ್ಲ. ಕೆಳಗೋಟೆಯ ಮುನ್ಸಿಪಲ್ ಕ್ವಾಟ್ರಸ್ ಹತ್ತಿರವಿದ್ದ ಒಂದು ಹೋಟೆಲ್ ಗೆ ದಿನಾಲು ಪೇಪರ್ ಓದಕ್ಕೆ ಹೋಗುತ್ತಿದ್ದೆ.ಹಾಗೆ ಒಂದು ದಿನ ಸಂಜೆ ನಾಲ್ಕುಗಂಟೆ ಸಮಯ.. ಹೊಟ್ಟೆ ಹಸಿವಾಗಿತ್ತು.ಕಾಪಿ ಟೀ ಕುಡಿದರೆ ಅದು ಓವರ್ ಕಿಕ್ ಹೊಡೆದು ಹೆಂಗೆಂಗೋ ಆಗುತ್ತಿದ್ದರಿಂದ ಹೊಟ್ಟೆ ಹಸಿವಾದಾಗ ಬ್ರೆಡ್/ಬನ್ ತೆಗೆದುಕೊಂಡು ನೀರಲ್ಲಿ ಅದ್ದಿಕೊಂಡು ತಿನ್ನುತ್ತಾ ಪೇಪರ್ ನ...