ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಲವು..

ಇಮೇಜ್
💕ಒಲವು💕 ಒಲವೆ ಓ ಒಲವೇ.. ಎಷ್ಟೊಂದು ಮಧುರ ಒಲವೇ... ನಿನ್ನೊಲವಿನ ಒಲವೇ ಈ ಜಗದಬಾಳ್ವೆಯ ಬಲವು.. //ಒಲವೇ// ಒಲವೇನೇ ನನ್ ಉಸಿರು  ಈ ಒಲವಿನ ಜೀವನದೀ ಎಲ್ಲವೂ ಸಿಕ್ಕಿದೆ ಅಂದುಕೊಂಡರೂ ನಮ್ಮಿಂದ ದೂರವೇ ಉಳಿದಿದೆ ಅದೇ ನಮ್ಮವರ 'ಒಲವು'*//ಒಲವೇ// ನಗುವಾಗಿದೆ ಗೆಲುವಾಗಿದೆ ನೋವಾಗಿದೆ ಈ ಒಲವು ಒಲವಿಗೆ ಒಲವೇ ಸಾಟಿ ಆಗಬೇಕಿತ್ತು ಆದರೆ ಇಹರು ಹಲವರು ಒಲವಿನ ಕ್ರೂರಿಗಳಾಗಿ.. ನಿಷ್ಕಲ್ಮಶ ಒಲವಿಗೆ ಬಂದಿದೆ ಇಂದು ಆಪತ್ತು... ಜಗದ ಎಲ್ಲಾ ಒ'ಲವ್ವಿ'ನ ಹಿಂದೆ ಅಡಗಿದೆ ಸಂಪತ್ತು...!! ಒಲವು ಸದಾ  ಹಸಿರಾಗಿರಲಿ  ನಮ್ಮೊಲವದೀ ಉಸಿರಾಗಿರುವವರಿಗೆ ಹುಸಿಯಾಗದಿರಲಿ ನಮ್ಮೊಲವ ನಂಬಿರುವವರಿಗೆ.. /ಒಲವೇ/ ✍️ನಾಗೇಂದ್ರ ಬಂಜಗೆರೆ

ಮಹತ್ವಾಕಾಂಕ್ಷೆಯ ನಿರಾಶಾ ಜನ..

ಇಮೇಜ್
#ಮಹತ್ವಾಕಾಂಕ್ಷೆಯ_ನಿರಾಶಾ_ಜನ... ಧರ್ಮಕ್ಕೊಬ್ಬ ಜಾತಿಗೊಬ್ಬ ಪಕ್ಷಕೊಬ್ಬ ನೇತಾರನ ನೇಮಿಸಿ ವರ್ತಮಾನದಿ ಇತಿಹಾಸವ ತಿದ್ದಿ-ತಿರುಚಿ ಮಾಡುತಿಹರು  ಕದನ ಕಾದಾಟವ ಶಾಂತಿಯ ತೋಟದಿ  ಚೆಲ್ಲುತಾ ನೆತ್ತರ ಓಕುಳಿಯ ನನ್ನ ಜನ..  ಸಾಧಿಸಿ ಹೋದ ಸಾಧಕರ ಸಾಧನೆಯ ಮೆರೆಯುತಾ  ಶಾಲೆಗೆ ಹೋಗದೆ ಶಾಲೆಯ ಕಟ್ಟದೆ ಗುಡಿಗೋಪುರವ ಕಟ್ಟುತ್ತಾ  ಸಾಧನೆ ಮಾಡುವುದ ಮರೆತ ನನ್ನ ಜನ.. ಜಗತ್ತಿನ ಪ್ರತಿ ಆವಿಷ್ಕಾರ ಕ್ಕೂ  ನಮ್ಮದೇ ಮೂಲ-ಮೊದಲೆಂದು  ಕೊಸರುವ ನಾವು ಬೇರೆಯವ್ರು ಪೇಟೆಂಟ್ಪಡೆಯುವ ಮೊದಲು ಪೇಟೆಂಟ್ ಪಡೆಯಲು ಮರೆತ ನನ್ನ ಜನ..  ಗತಿಸಿದ ಗತ ದಿನಗಳ SILVER jubilee, GOLDEN Jubilee DIAMOND Jublee ಮಹೋತ್ಸವಗಳ  ಆಚರಣೆಗಳ ಸಂಭ್ರಮದಿ ಓಲಂಪಿಕ್ ಗಳಲ್ಲಿ ಕಂಚು ಬೆಳ್ಳಿ ಬಂಗಾರದ ಪದಕವ ತರಲು ಮರೆತ  ನನ್ನ ಜನ.. ಅಸಂಖ್ಯಾತ ದೇಶದ ಜನಸಂಖ್ಯೆಯಲಿ ಬಹುಸಂಖ್ಯಾತ-ಅಲ್ಪ ಅಸಂಖ್ಯಾತ ಹೋರಾಟದಿ  ದೊಡ್ಡವರು ದಡ್ಡರಾಗಿ ಸಹೋದರತೆ ಪ್ರೀತಿ ವಾತ್ಸಲ್ಯ  ಮರೆತ ನನ್ನ ಜನ ..  ಜಗದ  ನಾನಾ ದೇಶಗಳು ಕಲ್ಪನೆಗೂ ನಿಲುಕದ ಸಾಧನೆಯ ಮಾಡಿ ಜಗತ್ತಿಗೆ ತೋರ್ಪಡಿಸುತ್ತಿರುವಾಗ ನೆರೆಯವರು ಹೊರೆಯಾದರೂ ನೆರೆಬಂದರೂ ಕಥೆ ಹೇಳುತಾ ಕಥೆ ಕೇಳುತಾ ಮಲಗಿ ಮರೆಯಾದ ನನ್ನಜನ... ಪರಾಧೀನ ಕಾರಕೂನ  ಶಿಕ್ಷಣದಿ ಆರಂಭಿಕ ಶಿಕ್ಷಣ ಪಡೆದರೂ ಪದವಿ ಸ್ನಾತಕೋತ್ತರರನ್ನು ಮೀರಿಸುವ ವಿದ್ವತ್ತು ಗಳ...

ಸ್ವಾತಂತ್ರ್ಯ ಇದ್ದರೂ ಬದುಕು ಅತಂತ್ರ..

ಇಮೇಜ್
#ಸ್ವಾತಂತ್ರ್ಯ_ಬಂದರೂ_ಬದುಕು_ಅತಂತ್ರ...   ದಾಸ್ಯಕ್ಕೆ ತೆರಿಗೆಯ ತೇದು ಗ್ಯರಸೆ ಗ್ಯರಸೆ  ದಿನಸೀ ಧಾನ್ಯ ಬೆಳೆದ ಅನ್ನದಾತ  ತಲೆಯಲ್ಲಿ ಅಕ್ಷರವಿರಲಿಲ್ಲ ಎದೆಯಲ್ಲಿ ಅಕ್ಕರೆಯಿತ್ತು ಸಕಲ ಜೀವಿಗಳಲ್ಲಿ... ಜವಾರಿ ಬೆಳೆದು ತಿಂದುಂಡ ಜವಾನನ ಜೀವ  ಗುಂಡ್ಕಲ್ಲು ಗುಡಿಸಲಾದರೂ ಜೋಪಡಿಯಾದರೂ ಚಳಿ ಮಳೆ ಸಿಡಿಲಿಗೆ  ಬೆದರದೆ. ಸ್ವದೇಶಿಗಳೇಕೆ ತೆರಬೇಕು  ಪರದೇಶಿಯರಿಗೆ ತೆರಿಗೆ ದಂಗೆದ್ದರು  ಒಟ್ಟಾದರು ಇಷ್ಟಾದರೂ ಪರದೇಶಿಗಳ ಸ್ವದೇಶದಿ ಓಡಿಸಿ ತಿರಂಗವ ಹಾರಿಸಿ ಜನಗಣಮನ ಹಾಡಿ..ಅಖಂಡ ದೇಶವು ಮೂರಾಗಿ ಇಬ್ಬಾಗಿಸಿ  ಬರ ಬಡಿಯಿತು ಬರ ಸಿಡಿಲಂತೆ ಭರತ ಮಾತೆಯ ಒಡಲಿಗೆ ಬರದಿ ಬರಿದಾದರು ಅನ್ನಧಾತರು ಬಾರದ ಮಳೆಯ ಕರೆಯುತಾ.. ಭಾರತಮಾತೆ ಹೆಣ್ಣು..ಆದಿವಕಾಲದಿಂದಲೂ ಸ್ವಾತಂತ್ರ ಕಸಿದ ಜನ ಸ್ವತಂತ್ರ ಸಿಕ್ಕ ಮೇಲೂ  ಸ್ವಾತಂತ್ರ್ಯ ಕೊಡದೆ ಜನಗಣಮನ ಹೇಳುವ ಜನಮನ... ಅನ್ನದಾತನಿಗೆ ಬೆಳೆಗೆ ಬೆಲೆ ಇಲ್ಲದಾಯ್ತು ಅನ್ನವಿಲ್ಲದಂತಾಯ್ತು..ಅನ್ನದಾತನಿಗೆ ಬೀಜದ ಹೆಸರಲ್ಲಿ ಅರೆ ಜೀವ ಕೀಟನಾಶಕದಿ ಪೂರ ಜೀವವ ತೆಗದು ತರಾವರಿ ತೆರಿಗೆಯ ಬರೆ ಹಾಕಿ ಬೀದಿಗೆ ನೇತಾಕಿದರು ಅವನ... ಶ್ರಮಿಕರ ರಕ್ತ ಬೆವರು ಹೀರಿ ಸಂಪಾದಿಸಿದ ಧನಿಕನ ಮನೆಯ ಮೇಲೆ ತಿರಂಗ ಧರ್ಪದಿ ನಗುತ್ತಿದ್ದರೆ ತಿರುಕನ ಮನೆಯ ತಿರಂಗ ಸ್ವಾತಂತ್ರ್ಯದ ಸಂಕೇತವಾದರೂ ನಿಂದೇನು ನಡೆಯದೆಂಬಂತಿತ್ತು... Happy Independence day... ✍️ ನಾಗೇಂದ್ರ ಬ...

ಸಮರದೀಂ ಸಾಮರಸ್ಯದೆಡೆಗೆ...

ಇಮೇಜ್
#ಸಮರದಿಂ_ಸಾಮರಸ್ಯದೆಡೆಗೆ... ಹಣೆಗೆ ತಿಲಕವಿಟ್ಟು ದಾಸ್ಯವ ಬಿಡಿಸಿ ಐಕ್ಯತೆಯ ಮೆರೆಯಲು  ಟೊಂಕಕಟ್ಟಿ ಮಾಡಿದರು ನಾನ ಹಬ್ಬವ ದೇಶಿಕರೆಲ್ಲರೂ ಸೇರಿ ಸಂಭ್ರಮಿಸಿದರು ದೇಸೀ ಕುಣಿತ ಹಾಡು ಆಟವ... ಹಬ್ಬವ ಮಾಡುತಾ,ಆಟವ ಆಡುತಾ ಮೊಳಗಿಸಿದರು ಸ್ವಾತಂತ್ರ್ಯದ ಕಹಳೆ ಎದೆಯೊಡ್ಡಿ ಹೊರಾಡಿ ಅಮರರಾದರು  ಪರಂಗಿಯರ ಫಿರಂಗಿಗೂ ಜಗ್ಗದೆ ಬಗ್ಗದೆ ... ರಾಮರಾಜ್ಯದ ಕನಸ ಕಂಡು ರಾಮ ರಹೀಮನು ಒಂದೇ ಎಂದು ದೇಶ-ದೈವಭಕ್ತಿಗಾಗಿ,ಜನ-ಮನರಂಜನೆಗಾಗಿ ಸಾಮರಸ್ಯಕ್ಕಾಗಿ ಮಾಡಲ್ಪಡುತ್ತಿದ್ದವು ಇಂದಾಗಿವೆ 'ಸೋಮರಸ'ಕ್ಕಾಗಿ  ಮಾಡುವಂತವುಗಳು..  ಅಹಿಂಸೆಯ ದೇಶದಿ ಹಿಂಸಿಸಲು ಬೀಜಾಸುರರ ಪಡೆ ಶಿಷ್ಟಾಚಾರ ಮರೆತು  ದುಷ್ಟಾಚಾರದೀ  ಉಗ್ರರಾಗಿ ಇನ್ನೊಬ್ಬರ ನೆತ್ತರು ಚೆಲ್ಲುತಿಹರು ತಮ್ಮ ಮನೋರಂಜನೆಗಾಗಿ..   ಧರ್ಮ ದರ್ಗಾ ಮಾನ ಮುಚ್ಚುವ ಬಟ್ಟೆಯಲ್ಲೂ ಕೊಳಕ ಕಂಡು ಸಮಾಜದಲ್ಲಿ  ಕಳೆ ತುಂಬ ಬೇಕಾದವರು ಸಮಾಜದಕಳೆಯಾಗಿಹರು. ಸಹೋದರರೋಳ್ ಕಾದಾಡಿ ಗಳಿಸುವುದೆಂತೆಂಬುದ ಅರಿಯಬೇಕಿದೆ ಅವರೂ- ಇವರು..ಹೊರಡಬೇಕಿದೆ ಸಮರದೀಂ- ಸಾಮರಸ್ಯದೆಡೆಗೆ ಮರೆಯಾದ ಐಕ್ಯತೆಯ ಸ್ಥಾಪಿಸಿ ಮೆರೆಯಲು.. ✍️ನಾಗೇಂದ್ರ ಬಂಜಗೆರೆ..

ನಗಿಸುವ ಹೂವು v/s ಎಂದೂ ಬಾಡದ ಹೂವು..

ಇಮೇಜ್
ಅಂದು ನಗುವು ಅರಳುವ ಹೂವು..ಇಂದು ಎಂದೂ ಬಾಡದ ಹೂವು...   ಹೆಂಗೆಳೆಯರು ಸಂಜೆಯ ಹೊತ್ತಲ್ಲಿ ಹಿತ್ಲಿನ ಹೂ ಕೊಯ್ದು  ಮೊಗದಲ್ಲಿ ನಗೆಯರಳಿಸಿ ಮುತ್ತಿನಂಥ ಘಮ ಘಮಿಸುವ ಮೊಗ್ಗು ಪೋಣಿಸುವ ಕೆಲಸ.*   *ಹೂ  ಹಿಡಿದು ಹೂ ಮುಡಿದು ಮಖವರಳಿಸಿ ನಗುವಲ್ಲಿ ನಲಿದಾಡುತ್ತಿದ್ದರು ನೀಳವೇಣಿಯಲ್ಲಿ ನೇತಾಡುವ  ಅರಳಿದ ಹೂವ ಮುಡಿದು ಶೃಂಗಾರ ಸಾಗರದಿ.. ಸುಮಗಳ ಘಮ ಅರಸಿ ಮಧು ಹೀರುವ  ಚಿಟ್ಟೆ  ರಂಗು ರಂಗಿನ ಸುಮಗಳ ಕಾಣುತೆಂದಿತು  ಓ ಜಗವೇ 'ನಾ ನಿನ್ನ ಪ್ರೀತಿಸಿಬಿಟ್ಟೆ...'  ಈಗಿನ ಪೋರಾ-ಪೋರಿಯರು ನಗುವ ಗುಲಾಬಿಯ ಹಿಡಿದೆಂದರು ನಿಜಾ ನಾ ಪ್ರೀತಿಸಿ-ಬಿಟ್ಟೆ..!!  ಹಿತ್ಲಲ್ಲಿ ಹೂ ಗಿಡವಿಲ್ಲ..ನಗುವ ಮೊಗದಲ್ಲಿ ನಗುವಿಲ್ಲ..ಶೃಂಗಾರಕ್ಕೂ ಶೋಭೆಯಿಲ್ಲ.. ನಗುವು  ಅರಳದ ಕಾಲಕ್ಕೆ  ಶೋಕಕ್ಕೂ -ಶೃಂಗಾರಕ್ಕೂ ಕಂಡು ಹಿಡಿದನಾ 'ಎಂದೂ ಬಾಡದ 'ಬಟ್ಟೆಯ ಹೂವ'..??? ✍️ ನಾಗೇಂದ್ರ ಬಂಜಗೆರೆ.