ಪೋಸ್ಟ್‌ಗಳು

ಅಕ್ಟೋಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಭಿಮಾನ ಮತ್ತು ದೇಶದ ಅಭಿವೃದ್ಧಿ..

#ಅಭಿಮಾನ_ಮತ್ತು_ದೇಶದ_ಅಭಿವೃದ್ಧಿ.. ಕೆಲವೇ ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದ ವಿಷಯ..ಅದೇನೆಂದರೇ ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಲಿದ್ದು ಇಲ್ಲಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾದರೆ ಇಡೀ ವಿಶ್ವದಲ್ಲೇ ಭಾರತ ಪ್ರಚಂಡ ಪ್ರಬಲ ರಾಷ್ಟ್ರಗಳ ಪೈಕಿ ಭಾರತವೇ ಅಗ್ರಗಣ್ಯ ರಾಷ್ಟ್ರ ಆಗುವುದು ಎಂದು ವಿಶ್ಲೇಷಿಸುತ್ತಿದ್ದರು. ಇದಕ್ಕಾಗಿ ಭಾರತದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಇರಬಹುದಾದ ಯುವ ಜನಸಂಖ್ಯೆಯ ಪ್ರಮಾಣ, ಆ ಯುವ ಶಕ್ತಿಗೆ ಇರಬಹುದಾದ ಕೌಶಲಗಳ ದೂರದೃಷ್ಟಿ,ದೇಶದ ಸುಸ್ಥಿರ ಅಭಿವೃದ್ಧಿಯ ಬೆಳವಣಿಗೆಗೆ ಮಾಡಿಕೊಂಡಿರುವ ಒಟ್ಟಾರೆಯ ಭವಿಷ್ಯದ ಸಿದ್ಧತೆಯನ್ನು ಸರ್ವೆ ಮಾಡಿದಾಗ ತಿಳಿದು ಬಂದದ್ದು  ಭಾರತದ ಜನಸಂಖ್ಯೆಯನ್ನು ನೋಡಿ ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮವ ಯಾವುದೇ ಲಕ್ಷಣಗಳು ಇಲ್ಲ... ಬದಲಾಗಿ ದೇಶದ ಯುವ ಸಮೂಹ ಸಾಗುತ್ತಿರುವ ದಿಕ್ಕು, ಯೋಚನೆಗಳು, ಕೌಶಲಗಳು,ದೂರದೃಷ್ಟಿ,ಜನಪ್ರತಿನಿಧಿಗಳ ಬದ್ಧತೆ ನೋಡಿದರೆ  ಇಂದು ಇರುವ ಜ್ಞಾನ,ಮೌಲ್ಯಗಳೂ ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಜಾಗತಿಕವಾಗಿ ಯಾರೂ  ಆತಂಕ ಪಡುವ ಅವಶ್ಯಕತೆಯೇ ಇಲ್ಲ ಎಂದು ಅಂತಿಮ ತೀರ್ಮಾನಕ್ಕೆ ಬಂದು ಅವರ ಸಿದ್ದತೆಯಲ್ಲಿ ಅವರು ಪ್ರಗತಿಯತ್ತ ಮುಂದೆ ಸಾಗುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಈ ತರ ನಿರ್ಧಾರಕ್ಕೆ ಬರಲು ಕೆಲ ಕಾರಣ ಮತ್ತು ಉದಾಹರಣೆಗಳು ಇಂ...

ಭಕ್ತಿ..

16. ಭಕ್ತಿ.. ಯಾವುದೇ ಒಬ್ಬ ವ್ಯಕ್ತಿ ವಿಷಯದ ಮೇಲೆ ಇರುವ ಅಪಾರ ನಂಬಿಕೆಯನ್ನು ಭಕ್ತಿ ಎನ್ನಬಹುದು...  ಒಂದು ಊರಿನಲ್ಲಿ ಒಬ್ಬ ಧನಿಕ ಇದ್ದ. ಅವನಿಗೆ ನಾಲ್ಕು ಮಕ್ಕಳಿರ್ತಾರೆ, ಆ ಧನಿಕ ಸಾಕಷ್ಟು ಸಂಪಾದಿಸಿರುತ್ತಾನೆ.ಆದರೆ ಆ ಧನಿಕ ಆ ಮಕ್ಕಳನ್ನು ನೀವು 'ಪ್ರಾಮಾಣಿಕರಾಗಿದ್ದರೆ' ನೀವು ಎಂದಿಗೂ ಜೀವನದಲ್ಲಿ ಸೋಲರಾರಿರಿ ಎಂದು ಭೋದಿಸಿ ಮಕ್ಕಳಿಗೆ ಏನನ್ನೂ ಕೊಡದೇ ಅವರವರ ಪಾಡಿಗೆ ಅವರು ದುಡಿದು ತಿನ್ನಬೇಕೆಂದು ಅವರನ್ನು ಬೇರೆ ಇಟ್ಟಿದ್ದ.ಆ ಮಕ್ಕಳು ಬೇರೆ ಇದ್ದರೂ ಅವರ ಪ್ರತಿ  ಹೆಜ್ಜೆಯನ್ನು ಗಮನಿಸುತ್ತಿದ್ದ ಆಧನಿಕ. ಆ ನಾಲ್ವರಲ್ಲಿ ಯಾರಿಗೆ ಕಷ್ಟ ಬಂದರೂ ಯಾರಿಗೂ ಗೊತ್ತಾಗದಂತೆ  ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ. ಹತ್ತಾರು ವರ್ಷಗಳ ಕಾಲ ಹೀಗೆ ನಡೆಯಿತು. ಆ ಮಕ್ಕಳಿಗೆ ಎದುರಾದ ನಾನಾ ಸಮಸ್ಯೆಗಳಿಗೆ ಈ ಧನಿಕನೇ ಸಹಾಯ ಮಾಡುತ್ತಿದ್ದುದರಿಂದ ಆ ಮಕ್ಕಳು ಎಂದು ಸೋಲದೇ ನೋಡಿಕೊಂಡಿದ್ದ. ಆ ಮಕ್ಕಳಿಗೂ ನಮ್ಮನ್ನು ಅಪ್ಪ ಹೇಳಿದಂತೆ  ನಾವು ನಡೆದುಕೊಂಡರೇ  ನಾವೆಂದೂ ಸೋಲಲಾರೆವು ಎಂಬ ನಂಬಿಕೆ ಅವರಲ್ಲೂ ಇತ್ತು. ಕಷ್ಟ ಬಂದರೂ ಅವರು ಮಾಡುತ್ತಿದ್ದ ಪ್ರಮಾಣಿಕತೆಗೆ ಅವರು ಗೆಲ್ಲುತ್ತಿದ್ದರು.ದಿನದಿಂದ ದಿನಕ್ಕೆ ಆ ಧನಿಕನ ವಯಸ್ಸು ಏರುತ್ತಿತ್ತು.  ಕೊನೆಯ ದಿನಗಳಲ್ಲಿ ಪೂರ್ವಾಭಿಮುಖವಾಗಿ  ಒಂದು  ಅಂತಸ್ತಿನ  ಮನೆಯನ್ನು ಕಟ್ಟಿಸಿದ. ಈ ಮನೆ ನಿಮ್ಮದಲ್ಲ ಸಂಜೆ ಐದು ಗಂಟೆಯ  ನೆರಳು ಮಾತ್ರ ...

ವ್ಯಕ್ತಿ ಗೌರವ

17.ವ್ಯಕ್ತಿ ಗೌರವ ವ್ಯಕ್ತಿ ಗೌರವ ಎಂದರೇ ಯಾವುದೇ ಒಬ್ಬ ಮನುಷ್ಯನಿಗೆ ಅವನಿಗೆ ಇರುವ ಅಧಿಕಾರ,ದೊರೆಯುವ ಸಂಬಳ,ಆತನ ಆರ್ಥಿಕ ಸ್ಥಿತಿಗತಿಗಳನ್ನು ಆಧರಿಸಿ ಗೌರವ ನೀಡದೇ ಆತನೂ ಒಬ್ಬ 'ಮನುಷ್ಯ'ಎಂಬ ಕಾರಣಕ್ಕೆ  ಸಿಗುವ ಗೌರವವೇ ವ್ಯಕ್ತಿಗೌರವ... ಶಿಕ್ಷಕರು ತರಗತಿಯಲ್ಲಿ ಪಾಠವನ್ನು ಮಾಡಲು ಸಿದ್ಧವಾಗಿ ಹೋಗಿದ್ದರು..ಹಿಂದಿನ ದಿನ ಶಾಲೆಗೆ ಜಿಲ್ಲಾಧಿಕಾರಿಯೊಬ್ಬರು ಆ ಶಾಲೆಗೆ ಭೇಟಿ ಮಾಡಿದ್ದರು. ನಿನ್ನೆ ನಮ್ ಶಾಲೆಗೆ ಜಿಲ್ಲಾಧಿಕಾರಿಯವರು ಬಂದಿದ್ರು ನೋಡಿದ್ರ?ನೀವು ಎಲ್ಲರೂ ಚೆನ್ನಾಗಿ ಓದಿ ನೀವು ಅವರ ತರ ದೊಡ್ಡ ಅಧಿಕಾರಿಗಳು ಆಗಬೇಕು  ಎಂದು ಹೇಳುತ್ತಿದ್ದಾರೆ.. ಆದರೆ ತರಗತಿಯಲ್ಲಿ ಮೂರನೇ ಬೆಂಚ್ ನಲ್ಲಿ ಕೂತಿದ್ದ ವಿದ್ಯಾರ್ಥಿನಿ ತನೇಹಾ ಏನನ್ನೋ  ತದೇಕ ಚಿತ್ತದಿಂದ ಯೋಚನೆ ಮಾಡುತ್ತಿರುವಂತೆ ಕಂಡಿತು. ಆ ವಿದ್ಯಾರ್ಥಿನಿ ಏನನ್ನೋ ತುಂಬಾ ಗಹನವಾಗಿ ಯೋಚನೆ ಮಾಡುತ್ತಿದ್ದಾಳೆಂದು ಅರಿತ ಶಿಕ್ಷಕರು ತನೇಹಾ ಎದ್ದೇಳಮ್ಮ ಏನು ತುಂಬಾ ಆಳವಾಗಿ ಯೋಚನೆ ಮಾಡುತ್ತಿದ್ದೀಯಾ ಏನಾದ್ರೂ ಪ್ರಾಬ್ಲಮ್ಮಾ??  ಎಂದು ಕೇಳಿದರು. ತಟ್ಟನೆ ಶಿಕ್ಷಕರ ಮಾತಿಗೆ ಎದ್ದು ನಿಂತ ತನೇಹಾ" ಸರ್ ನೀವೇನು ಅಂದುಕೊಳ್ಳಲ್ಲ ಅಂತ ಅಂದ್ರೆ ನನ್ನದು ಒಂದು ಪ್ರಶ್ನೆ ಇದೆ ಇದೆ ಸರ್ ಕೇಳಲಾ?"  ಧಾರಾಳವಾಗಿ ಕೇಳಮ್ಮ ಅದಕ್ಕೇನು? 'ಸರ್ ನಿನ್ನೆ ನಮ್ಮ ಶಾಲೆಗೆ ಜಿಲ್ಲಾಧಿಕಾರಿಗಳು ಬಂದಿದ್ದರು ಅವರು ವಯಸ್ಸಿನಲ್ಲಿ ನಿಮಗಿಂತ ಚಿಕ್ಕವರು ಎನಿಸಿತು ಆದರೂ ಕೂಡ ನೀವು...

ಶ್ರಮ ಗೌರವ..

18.ಶ್ರಮ ಗೌರವ.. ಶ್ರಮ ಗೌರವ ಎಂದರೆ ಮಾಡುವ ಕೆಲಸವನ್ನು ಗೌರವಯುತವಾಗಿ ಕಾಣುವುದು. ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬಂತೆ ಜೀವಿಗಳ ಶ್ರೇಷ್ಠತೆ ಕುಲದಿಂದ ಬರುವುದಿಲ್ಲ ಕಾಯಕದ ಶ್ರಮದಿಂದ ಬರುತ್ತದೆ ಎಂಬುದನ್ನ ಅರಿಯುವುದು. ರಾಜು ಹಳ್ಳಿ ಹುಡುಗ . ತಂದೆ ಚಂದ್ರಪ್ಪ ರೈತ ಮೂರು ಎಕರೆ ಹೊಲ 2 ಎತ್ತುಗಳೇ ಅವರ ಆಸ್ತಿ.ರಾಜು ತಂದೆ ತಾಯಿ ಹೊಲದಲ್ಲಿ ವ್ಯವಸಾಯ ಮಾಡಿ ಕುಟುಂಬದ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ನಗರದ ವಿದ್ಯಾರ್ಥಿಗಳ ಗೆಳೆತನ ಮಾಡಿದ ರಾಜು ಡ್ರೆಸ್,ಊಟ ಭಾಷೆ ಹೀಗೆ ಎಲ್ಲಾ ವಿಷಯದಲ್ಲೂ ಕೆಲವು ಸ್ನೇಹಿತರನ್ನು ಅನುಕರಿಸುತ್ತಿದ್ದನು.ನಮ್ಮ ತಂದೆ ತಾಯಿ ಕೃಷಿಕರು ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದನು. ಮನೆಯಲ್ಲಿ ಅಮ್ಮ ರಾತ್ರಿಯ ಅನ್ನ ರೊಟ್ಟಿ ಅಥವಾ ಮುದ್ದೆ ಇದೆ ಊಟ ಮಾಡಿ ಹೋಗು ಎಂದರೆ ರಾಜು ಕೋಪಿಸಿಕೊಳ್ಳುತ್ತಿದ್ದ.ಮಗ ಉಪವಾಸ ಹೋಗುವನಲ್ಲಾ ಎಂದು ಬಿಸಿಯಾದ ತಿಂಡಿ ಮಾಡಿ ಊಟ ಮಾಡಿಸಿ ಅಮ್ಮ ಕಳಿಸುತ್ತಿದ್ದಳು. ಒಂದು ದಿನ ಅಮ್ಮನಿಗೆ ಹುಷಾರಿರಲಿಲ್ಲ.ಹೊಲದಲ್ಲಿ ಕಳೆ ಬೆಳೆದು ನಿಂತಿತ್ತು.   ಅಪ್ಪ: "ರಾಜು ನಾಳೆ ಶಾಲೆಗೆ ರಜೆ ಇದೆಯಲ್ಲ ನನಗೆ ಒಂದು ಸಹಾಯ ಮಾಡುವೆಯಾ?   ರಾಜು: ಹ್ಞೂಂ.. ಹೇಳಿ ಅಪ್ಪ...   ಅಪ್ಪ: ಏನಿಲ್ಲ ಮಗ ನಾಳೆ ಹೊಲದಲ್ಲಿ ಸ್ವಲ್ಪ ಎಡೆಕುಂಟೆ ಹಾಕುವುದಿದೆ. ಬರ್ತೀಯಾ ??   ರಾಜು: ನಾನು ಬರುವುದಿಲ್ಲ.. ನಾನು ಗೆಳೆಯರೊಂದಿಗೆ ಆಟ ಆಡಬೇಕು.. ಟಿ...

ಅಚಲ ಯಾನ... ಬಳ್ಳಾರಿ ಕೋಟೆ

ಇಮೇಜ್
#ಅಚಲ_ಯಾನ ಬೆಳ್ಳಂಬೆಳಗ್ಗೆ ಎದ್ದು  ಗಡಿಯಾರ ನೋಡಿದರೆ ಗಂಟೆ 4-30 ಆಗಿತ್ತು...ನನ್ನಳಗಿನ ಸೋಮಾರಿ "ಇವತ್ತು ಸಂಡೇ...ನೀನಿನ್ನೂ ಕನಿಷ್ಠ ಎರಡು hour ಮಲಗಬಹುದು" ಎನ್ನುತ್ತಿದ್ದ..ಅಲ್ಲೇ ಪಕ್ಕದಲ್ಲಿದ್ದ ನನ್ನೊಳಗಿನ ಕ್ರಿಯಾಶೀಲ "ಎದ್ದೇಳೋ... ಆಗಲೇ 4-30 ಆಗಿದೆ. ಏನೆಲ್ಲಾ ಮಾಡುವುದು, ನೋಡುವುದು ಬಾಕಿ ಇದೆ... ಇನ್ನೂ ಎಷ್ಟು ದಿನ ಅಂತ ಮಲಗುತ್ತೀಯಾ??" ಎಂದು ಜಾಡಿಸಿ ಹೊಡೆಯುತ್ತಿದ್ದ... ಏನು ಮಾಡುವುದು??? ಬಹಳ ದಿನಗಳು ಸೋಮಾರಿಯ ಮಾತನ್ನೇ ಹೆಚ್ಚು ಹೆಚ್ಚು ಕೇಳುತ್ತಿದ್ದ ನಾನು ಇಂದು ನನ್ನೊಳಗಿನ 'ಕ್ರಿಯಾಶೀಲ' ನ ಮಾತು ಕೇಳಿದೆ.ಸರಿ ಎಂದು ಕೆಳಗೆ ಬಂದು ಕ್ಯಾಮೆರಾ ಹೆಗಲಿಗೆ ಹಾಕಿ ಬೈಕ್ start ಮಾಡಿದೆ.  ಚಿತ್ರದುರ್ಗದ ಕೋಟೆಯ ಪ್ರತಿ ಬಂಡೆಯ ಮೇಲೂ ಹೆಜ್ಜೆ ಇಟ್ಟಿದ್ದ ನನಗೆ ಬಳ್ಳಾರಿಯ ಕೋಟೆಯ ನೋಡಿದ ದಿನವೇ ಹತ್ತಬೇಕೆಂದು ಬಯಸಿದ್ದ ನಾನು ನನ್ನೊಳಗಿನ ಸೋಮಾರಿಯ ಗುಲಾಮನಾಗಿದ್ದ ನಾನು ಬಳ್ಳಾರಿಗೆ ಬಂದು 18 ವರ್ಷವಾದರೂ ಹತ್ತಲು ಸಾಧ್ಯವಾಗಿರಲಿಲ್ಲ. ಅಂದುಕೊಂಡಂತೆ ಬಳ್ಳಾರಿ ಟಿಪ್ಪುಸುಲ್ತಾನನ ಕೋಟೆಯ ಮುಂದೆ ನನ್ನ 'ನೀಲಿಮಾ' ಕುದುರೆ ನಿಲ್ಲಿಸಿದೆ. ಅಲ್ಲಿಗೆ ಹೋದಾಗ 05-05 ನಿಮಿಷ... ಬೆಡ್ ಶೀಟ್ ಹೊದ್ದು ಮಲಗಿದ್ದ ಸೆಕ್ಯೂರಿಟಿ ಅವರು ಕಣ್ಣುಜ್ಜುತ್ತಾ  ಏನ್ ಸಾರ್ ಎಂದರು??? ನಾನು:  ಒಳಗೆ ಹೋಗಬೇಕು..ಕೋಟೆ ಹತ್ತಬೇಕಿತ್ತು.....  ಸೆಕ್ಯೂರಿಟಿ: ಸರ್... ಬೆಳಗ್ಗೆ ಬೆಳಿಗ್ಗೆ...

ಗೆಳತಿಯ ನೆನಪು

ಗೆಳತಿಯ ನೆನಪು.. ನಿನ ನೆನಪೇ ನೆನಪಾಗುತಿಹುದು ಗೆಳತಿ ನಿನ ನೆನಪೇ ನೆನಪಾಗುತಿಹುದು.. /ಪ/ /ನೆನಪಿದೆಯಾ ನಿನಗೆ ಕೈ ಹಿಡಿದು ಸುತ್ತಾಡಿದ ನೆನಪು../ ನಿನ ನೆನಪೇ ನನಗಾಗುತಿಹುದು ಗೆಳತಿ  ನಿನ ನೆನಪು ನನಗಾಗುತಿಹುದು.. /ಪ/ /ನೆನಪಿದೆಯಾ ನಿನಗೆ ನಾವಾಡಿದ ಕಣ್ಣ ಭಾಷೆ../ /ನಾ ಕೊಟ್ಟ ಕೆಂಗುಲಾಬಿಯ ನೀ ಮುಡಿದದ್ದು../ /ಪ/ /ನಾ ಹೋಳಿ ಬಣ್ಣ ಹಚ್ಚಿದ್ದು ನಮ್  ಬಾಳು ರಂಗುರಂಗಾಗಿರಲಿ ಎಂದು./. /ನೆನಪಿದೆಯಾ ಗೆಳತಿ ನೀ ನನ ಮೇಲೆ ಮುನಿಸಿಕೊಂಡಿದ್ದು/ /ಪ/ /ನನ ಮನ ಕವಲಾಗಿ ನಿನ ಮನೆಯ ಹಾದಿ ನೆನಪಾಗುತಿಹುದು ಇಂದು/ / ನೆನಪಾಗುತಿಹುದು  ನಾವು ನಕ್ಕು ನಲಿದಾಡಿದ್ದು/ /ಪ/ ನೆನಪಿದೆಯೇ ನಾ ಮಾಡಿದ ನವಿಲಗರಿಯ ನಿವೇದನೆ /ನಾನೊಬ್ಬನೇ ನಗುತಿರುವೆ ನಿನ ಸವಿ ನೆನಪ ನೆನೆದು/./ಪ/ /ನನ ಜೊತೆಯಿರಬೇಕು  ನೀ ಎಂದೆಂದಿಗೂ ನೆರಳಿನಂತೆ../ /ಇರದಿದ್ದರೆ ನಿನ ನೆನಪುಗಳೇ ಸಾಕು ಈ ಜೀವಕೇ../ /ಪ/ ರಚನೆ-ರಾಗ ಸಂಯೋಜನೆ-ಗಾಯನ-ನಾಗೇಂದ್ರ ಬಂಜಗೆರೆ.