ಪೋಸ್ಟ್‌ಗಳು

ನವೆಂಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಲಹು ಸಲುಹಿದ ಭೂ ತಾಯ.‌‌..

#ಸಲುಹಿದ_ಭೂ_ತಾಯಿಯ... ಧರೆಗಾಗಿ ಮಹಾಭಾರತ ಗತಿಸಿತು.. ಈ ಧರೆಗಾಗಿ ದೊರೆಗಳು ಆಳಿದರು ರಾಜ್ಯವ.. ಸೀಮೆಯ ವಿಸ್ತರಿಸಿದರು ಕಾಶ್ಮೀರದಿಂ ಕನ್ಯಾಕುಮಾರಿವರೆಗೆ ಆದರೂ ಧರೆಯ ಮಣ್ಣು ಈ ದೊರೆಗಳಿಗೆ ಸೇರದೆ  ದೊರೆಗಳೇ ಮಣ್ಣಿಗೆ ಸೇರಿದರು ಕೊನೆಗೆ.. ಭೂಮಿಗಾಗಿ ನಡೆದಿದೆ ದೇಶ ದೇಶಗಳ ಮಧ್ಯೆ ಕದನ ಭೂಮಿಗಾಗಿ ಕೊಂದಿಹರು ಹೆತ್ತವರ ಪ್ರೀತಿಸಿದ ಬಂಧುಗಳ ಮರೆತು ಮೂರು ದಿನದ ಬದುಕಿಗೆ.. ಬೇಟೆಯಾಡಿ ಬಡಿದು ತಿಂದರು ಕಾಡು ಮೃಗಗಳ..ಭಸ್ಮ ಮಾಡಿದರು  ಅರಣ್ಯವ ಖನಿಜ ಬಗೆಯಲು ಭೂಮಿಗೆ ಹಾಕಿದರು ಕನ್ನ.. ತೆಗೆದರು ಗ್ಯಾಸ್ ಪೆಟ್ರೋಲ್ ಚಿನ್ನ. ಅದೆಷ್ಟು ದಿನ ಬರಬಹುದು ಇನ್ನಾ.?? ಬೀಜ ಬಿತ್ತಿ ಹೊನ್ನಬೆಳೆ ಬೆಳೆದರು ನಮ್ಮ ಅಜ್ಜ ಮುತ್ತಾತ..ಅನ್ನವ ನೀಡಿದ ಭೂಮಿಗೆ ದೇವರಭಕ್ತಿಯ ಮೆರೆದರು.. ಈಗಿನವರು ಅನ್ನವ ಬೆಳೆವ ಮಣ್ಣಿನಲಿ ಯೋಜಿಸಿಹರು ಪ್ರಿಂಟ್ ಹಾಕಲು ನೋಟು.! ಆದರೆ ಹೊಟ್ಟೆಗೆ ತಿನ್ನಬೇಕಾಗುವುದೇನೋ ?? ಜೀವ ಜಲ ಇರುವುದು ಇಲ್ಲೆ ಮಂಗಳ ಚಂದಿರನಂತೆ ಬರಡುಗಲ್ಲಲ್ಲ ಈ ಭೂಮಿ ನಿನ್ನ ಚಟ-ವಟಿಕೆಗೆ  ಕಾವಲಿ   ಕಾದಂತೆ ಕಾದಿಹುದು ಈ ಭೂಮಿ ತಾಪಕ್ಕೆ ನಿರ್ಗಲ್ಲು ಜಾರುತಿಹದು ಸಾಗರ ಸರಿಯುತಿಹುದು ಕಾಪಾಡು ಓ ಮನುಜ ನಮ್ಮ ಮಕ್ಕಳೂ ಮೊಮ್ಮಕ್ಕಳು ನೋಡಲಿ ಓಡಾಡಲಿ ಒಂದು ದಿನ ಇರುವುದೊಂದು ಈ ಭೂಮಿಯಲಿ.. ನೋಡು ಬಾ ಭೂರಮೆಯ ಸಿಂಗಾರ.. ಹಾಸಿಹಳು ಹಸಿರ ಹಾಸಿಗೆ ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು ಭೂತಾಯ ಮಡಿಲು ಬರಿದಲ್ಲ  ಸಲುಹುತ...

ಮೊಟ್ಟೆಯೂ... ಸೃಷ್ಠಿಯೂ...

ಇಮೇಜ್
#ಮೊಟ್ಟೆಯೂ...#ಸೃಷ್ಠಿಯೂ.... ನನ್ನ ಹಾಸ್ಟೆಲ್ ದಿನಗಳಲ್ಲಿ  ಒಂದಷ್ಟು ದಿನ ಒಬ್ಬ  B ed  ಆದ ಬಾವಿ ಶಿಕ್ಷಕನೊಬ್ಬ ಹಾಸ್ಟೆಲ್ ಮಕ್ಕಳಿಗೆ ಗಣಿತ ಪಾಠವನ್ನು ಉಚಿತವಾಗಿ ಹೇಳಿಕೊಡಲು ಬರುತ್ತಿದ್ದ. ಹೇಳಿ ಕೇಳಿ  ನಮ್ಮ ಹಾಸ್ಟೆಲ್ ಹುಡುಗರು ಇಂಗ್ಲೀಷ್  ಹಾಗೂ ಗಣಿತದಲ್ಲಿ  ವಾಸ್ತವ ಲೆಕ್ಕಕ್ಕೆ ಬಹಳ ಬಹಳ ದೂರವೇ ಇದ್ದುದರಿಂದ  ಅವರ ಅಲ್ಪ ಸಹಾಯವೂ ಬೆಟ್ಟದಷ್ಟು ಸಹಾಯವಾಗಿತ್ತು. ನಮ್ಮ ಎಲ್ಲಾ ಹುಡುಗರು ಅಷ್ಟೊ ಇಷ್ಟೋ ಗಣಿತದ ಬಗ್ಗೆ ಇದ್ದ ಜ್ಞಾನದ ಆಧಾರದ ಮೇಲೆ  ಮಂದೆ ಸಾಗುತ್ತಿದ್ದೆವಾದರೂ  ಕೆಲವರಿಗೆ  ಸಂಕಲನ ವ್ಯವಕಲನ ದಶಕ  ಸಹಿತ  ಲೆಕ್ಕಗಳು ಕಷ್ಟ ಎನಿಸುತ್ತಿದ್ದವು.ಅದಕ್ಕಾಗಿ ನಮ್ಮ ಹಾಸ್ಟೆಲ್ ನಿಂದ ಕೆಲವೇ ದೂರದಲ್ಲಿ ಇದ್ದ ಗೆಜ್ಜಗದ ಪೊದೆಯಿಂದ ಗೆಜ್ಜಗದ ಬೀಜಗಳನ್ನು ಎಣಿಕೆ ಮಾಡಲು ತಂದು ಹಾಕಿದ್ದೆವು. ಅದರಲ್ಲಿ ಒಬ್ಬ ಹುಡುಗ ಇದ್ದ... ಅವನ ಹೆಸರು ತಿಪ್ಪೇಶ ಅಂತ. ನಮಗೆ ಆದರೆ ಅವನು ಗಾಬರಿ ಆದಾಗ, ಗೊಂದಕ್ಕೊಳಗಾದಾಗ ಅವನು ಕಣ್ಣುಗಳನ್ನು ಪಿಳಿ ಪಿಳಿ ಬಿಡುತ್ತಿದ್ದಿದರಿಂದ ಅವನನ್ನು 'ವಿಕ್ಕಿ-ಮಿಕ್ಕಿ' ಎಂಬ ಅನ್ವರ್ಥನಾಮದಿಂದಲೇ ಅವನನ್ನು ಗುರುತಿಸುತ್ತಿದ್ದೆವು. ಹೀಗೆ  ಗೆಜ್ಜಗದಿಂದ ಲೆಕ್ಕ ಮಾಡುತ್ತಾ ಮಾಡುತ್ತಾ ಕೊನೆಗೆ ಗೆಜ್ಜಗವನ್ನು ಬಿಟ್ಟು ಹಾಗೆ ಎಣಿಸಿಕೊಂಡು ಲೆಕ್ಕ ಮಾಡಿ ಹೇಳಬೇಕಾಗಿತ್ತು ಅಥವಾ  ಬರೆಯಬೇಕಾಗಿತ್ತು. ಪಾಪ ಈ ತಿಪ್ಪ...

ಮುಗಿದ ಅಧ್ಯಾಯಗಳು...

ಮುಗಿದ ಅಧ್ಯಾಯಗಳು... _( ಬಾಳ ದಾರಿಯ ಹಿಂತಿರುಗಿ ನೋಡಿದರೆ....)_  ಮಹಾಭಾರತದ ಒಂದು ಸನ್ನಿವೇಶ...ಒಮ್ಮೆ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದ.. ಈ ಗೋಡೆಯ ಮೇಲೆ ಒಂದು ಸಂದೇಶ ಬರಿ, ಅದು ಹೇಗಿರಬೇಕೆಂದರೆ ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು, ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದ. ಆಗ ಶ್ರೀ ಕೃಷ್ಣ ಹೇಳುತ್ತಾನೆ" ಈ ಸಮಯ ಕಳೆದು ಹೋಗುತ್ತದೆ…" ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರ ನೀಡುತ್ತಾನೆ ಕೃಷ್ಣ.ದುಃಖದಲ್ಲಿರುವವರು ಈ ಸಮಯ ಬೇಗ ಕಳೆದುಹೋಗಲಿ ಎಂದು ಬಯಸಿದರೆ,ಸಂತೋಷದಲ್ಲಿದ್ದವರು 'ಸಂತೋಷ' ಇಷ್ಟು ಬೇಗ ಮುಗಿದು ಹೋಯಿತೇ ??ಎಂದು ಬೇಸರಪಡುತ್ತಾರೆ.ಅಂದರೇ ಹಿಂದೆ ಇದ್ದದ್ದು ಈಗ ನಮ್ಮ ಬಳಿ ಉಳಿದಿಲ್ಲ....ಅದು ವಯಸ್ಸು,ಸೌಂಧರ್ಯ,ವಸ್ತು,ವ್ಯಕ್ತಿ ಏನಾದರೂ ಸರಿಯೇ... ಅದಕ್ಕೆ ಕಾರಣ ಈ ಕಾಲ.. ಇಲ್ಲಿ  ಪ್ರತಿಯೊಬ್ಬರಲ್ಲೂ ಹೀಗೆ   ಜೀವನದಲ್ಲಿ ಒಮ್ಮೆ ನಮ್ಮಿಂದ ಘಟಿಸಿದ್ದು, ಅದು  ಈಗ ಆಗುತ್ತಿಲ್ಲ... ಅದು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು‌ ಎಲ್ಲರಿಗೂ ಅನಿಸುವುದು. ಒಂದು ದಿನ ನನ್ನಿಂದ ಕೈಗೊಡಿದ್ದು ಈಗ ಅದು ಕೈಗೂ ನಿಲುಕುತ್ತಿಲ್ಲ ಎಂದೂ,ಅದು ನನ್ನಿಂದೆಂದೂ ಆಗದೆಂದು,ಒಂದೊಮ್ಮೆ ಪ್ರಯತ್ನಿಸಿದರೆ  ಕೆಲವು ಕಿರಿಯರು ಈ 'ವಯಸ್ಸಲ್ಲಿ ನಿಮಗೆ ಇವೆಲ್ಲಾ  ಬೇಕಾ"??ಎಂದು ಗೇಲಿ ಮಾಡುವ ಸಂಕೋಚದಿಂದಲೋ ಅವರಿಂದ ಅದು ಸಾಧ್ಯವಾದರೂ,ಅದನ್ನು  ಮಾಡುವ ಪ್ರಯತ್ನದಿಂದಲೇ ಹಿ...

ನೋಟು-ವೋಟು...

ಇಮೇಜ್
*ನೋಟು-ವೋಟು....* ಆರುಷಿ Krish ಗೆ ಕಾಲ್ ಮಾಡಲು ಮೊಬೈಲ್ ತೆಗೆದು ಡಯಲ್ ಮಾಡಿದ... ಮೊಬೈಲ್ ರಿಂಗಾಯಿತು... Krish :ನಮಸ್ತೆ ಬಾಸ್... ಆರುಷಿ:ನಮಸ್ತೆ... ದೇವ್ರು...ಅರಾಮಿದ್ದೀರಾ ದೇವ್ರೂ?? Krish:ಅರಾಮಿದ್ದೀನಿ ಬಾಸ್... ಏನ್ ಬಾಸ್ ತುಂಬಾ ದಿನ ಆದಮೇಲೆ  ಕಾಲ್ ಮಾಡಿದ್ರಿ....  ಆರುಷಿ:ನಾಳೆ ನಾನು ನಿಮ್ಮ ಊರಿಗೆ ಬರುತ್ತೇನೆ... ಹೌದಾ ಏನ್ ಬಾಸ್ ಸಮಾಚಾರ ?? ಆರುಷಿ:ಎಲೆಕ್ಷನ್ನು.... ವೋಟ್ ಹಾಕಬೇಕಿತ್ತು ದೇವ್ರೂ... Krish:ಹೊಡೆದ್ರಲ್ಲಾ ಬಾಸ್ ಲಾಟರಿ... ಅವರು 1500,ಇವರೂ 2000 ... ಭರ್ಜರಿ ಆಪರ್ ನಮ್ಮು ಹುಡುಗ್ರೆ ಹಂಚುತಿರುವವರು... ಬನ್ನಿ ಬನ್ನಿ.... ಆರುಷಿ:ವಗ್ಗಣ್ಣೆ..‌ ಮಿರ್ಚಿ...90-180 ಎಲ್ಲಾ ಬಿಟ್ಟು ಬಿಟ್ರಾ???ಈಗ ಪುಲ್ ಕ್ಯಾಷ್.... ಈಗ... ಹ್ಞೂ ಬಾಸ್... ಬನ್ನಿ ನೀವು ತಗೊಳ್ಳರಂತೆ... ಆರುಷಿ:ನಾನು ಯಾವತ್ತೂ ತಗಂಡಿಲ್ಲ ದೇವ್ರೂ.... Krish:ಏನಾಗಲ್ಲ ಬರ್ರಿ ಸ್ವಾಮಿ.... ಊರಲ್ಲಿ ಎಷ್ಟು Vote ಇದಾವೋ ಅಷ್ಟು vote ಗೆ fund ಬಂದಿದೆ.. ನೀವು ತಗೊಳ್ಳಲಿಲ್ಲ ಅಂದ್ರೆ ಇವರೇ ಯಾವಾನೋ ತಗೊಳ್ಳುತ್ತಾನೆ..‌ ತಗೊಳ್ಳಿ... ತಗೊಳ್ಳಿ... ಆರುಷಿ:ತಗೋಳಣಾ??? Krish:ನೀವ್  ತಗಳೋಣ ಅಂದ್ರೆ ... ಒಂದೇ ನಿಮಿಷ ...  ಆರುಷಿ:ನೋಡೋಣ ತಗಳಪ್ಪ ನಾಳೆ ಹನ್ನೆರಡರ ನಂತರ ಬರುವೆ... ಮರುದಿನ ಕಾಲ್ ಮಾಡಿ  ಏನಪ್ಪ krish ಇದ್ದೀರಾ ??ನಾನು ಹೊರಡುತ್ತಿದ್ದೇನೆ... ಎಂದೆ..‌ ಹ್ಞಂ... ಸಿ...

TRENDING...Begins from HISTORY ಟ್ರೆಂಡಿಂಗ್...

ಇಮೇಜ್
#ಟ್ರೆಂಡಿಂಗ್.... _Begin's from History....._ ಮೊನ್ನೆ ನಮ್ಮ ಏರಿಯಾದಲ್ಲಿ ಯಾರೋ ಸುಸಂಸ್ಕೃತ ಕುಟುಂಬದವರೊಬ್ಬರು Filter water ಪೈಪಿಗೆ 'ಗಂಗಮ್ಮನ ಪೂಜೆ' ಮಾಡಿದ್ದರು. ಈ ಗಂಗಮ್ಮನ ಪೂಜೆ ಮಾಡುವುದು  ಹಿಂದೂ ಧರ್ಮದ ಒಂದ ಆಚರಣೆ.ಇದು ಮೊದಲು ನದಿಯಲ್ಲಿ ಮಾಡುತ್ತಿದ್ದುದು ಹಳ್ಳಕ್ಕೆ ಬಂತು,ಹಳ್ಳದಿಂದ  ಸೇದುವ ಬಾವಿಗೆ ಪೂಜೆ ಮಾಡಿದರು. ಸೇದುವ ಬಾವಿಯಿಂದ ಜಗ್ಗುವ ಬೋರಿಗೆ ಗಂಗಮ್ಮನ  ಪೂಜೆ ಮಾಡಲು ಶುರುಮಾಡಿದ್ದರು.. ಈಗ WATER FILTER ಗೆ ಗಂಗಮ್ಮನ ಪೂಜೆ ಮಾಡಿರುವುದು ನೋಡಿ ಈ 'TRENDING' ಎಲ್ಲಿಂದ ಎಲ್ಲಿಗೆ ಬಂತು ಎಂದು ಚಿಂತೆ ಮತ್ತು ನಗೂ ಎರಡೂ ಬಂತು...ಅದರ ಬೆನ್ನಟ್ಟಿ ಇತಿಹಾಸಕ್ಕೆ ಹೋದಾಗ ನನಗನಿಸಿದ ಅನಿಸಿಕೆ ಇಲ್ಲಿ ವ್ಯಕ್ತಪಡಿಸಿದ್ದೇನೆ. ವಿಶಾಲವಾದ ಭೂಮಿಯ ಮೇಲೆ ವಾಸವಿದ್ದ  ಅನೇಕ ಜೀವ ಜಂತುಗಳಲ್ಲಿ ಮಾನವನು ಒಂದು ಜೀವಿ...ಆರಂಭಿಕ ದಿನಗಳಲ್ಲಿ ಅವನ ಜೀವನ ಪದ್ದತಿಯು ಆಹಾರಕ್ಕಾಗಿ ಅಲೆದಾಟ, ಬಿಡುವಾದಾಗ ವಿನೋದ, ಇತರ ಗುಂಪಿನವರೊಂದಿಗೆ ಕಾದಾಟ ಆಹಾರ ಲಭ್ಯವಿರುವ ಸ್ಥಳಗಳಿಗೆ ವಲಸೆ. ಹೀಗೇಯೇ ದಕ್ಷಿಣ ಆಫ್ರಿಕಾ ದ 'ಲೂಸಿ'ಯ ಸಂತತಿ  ಜಗತ್ತಿನಾದ್ಯಾಂತ ಬೆಳೆದು ಬಂದ ಟ್ರೆಂಡಿಂಗ್ ನ ಕತೆಗಳು... _HiSTORY -1_ ಸೊಂಟಕ್ಕೆ ಸೆಣಬಿನ ನಾರು ಸುತ್ತಿಕೊಂಡಿರುವ ಸಾವಿರಾರು ಜನ...ಮಣ್ಣಿನ ಮಗಿಗಳನ್ನು ಕೈಯಲ್ಲಿ ಹಿಡಿದು ಸರತಿ ಸಾಲಿನಲ್ಲಿ ಹೋಗುತ್ತಿದ್ದಾರೆ.ಕಲ್ಲಿನ ದೋಣಿಗಳಲ್ಲಿ ಸುರು...

ಕನಸು ಕಥೆಯಾದಾಗ...ಕನಸು-10

ಇಮೇಜ್
ಕನಸು ಕತೆಯಾದಾಗ.. ಕನಸು -10 ನಾವಿಬ್ಬರೂ ವೃತ್ತಿಯಲ್ಲಿ ಸರ್ಕಾರಿ ನೌಕರರು ಯಾವುದೇ ಹಣಕಾಸಿಗೆ ಕೊರತೆ ಇಲ್ಲವಾದರೂ ಆಗಾಗ ಯಾವುದಕ್ಕಾದರೂ  ಕೆಲವೊಂದು ಸಂದರ್ಭದಲ್ಲಿ ಹಣಕಾಸಿನ ಕೊರತೆ ಬಂದಾಗ ನಾನು"ನನ್ನದೂ ದುಡ್ಡು ಇದೆ ಕಣೇ ....ಬರತ್ತೇ..." ಎಂದು ಆಗಾಗ ಹೇಳುತ್ತಿದ್ದೆ. ಅವಳು  ಆರಂಭದಲ್ಲಿ ಇರಬಹುದೇನೋ ಎಂದು ನಂಬಿದ್ದಳು... ಯಾವಾಗಲಾದರೂ ಕೇಳಿದಾಗಲೂ ಇದೆ ಯಾವಾಗಲಾದರೂ ಹೇಳುತ್ತೇನೆ...ಅಂತಾನೆ ಹೇಳುತ್ತಿದ್ದೆ. ನಿಮ್ಮದೂ  ದುಡ್ಡಿದೆ  ದುಡ್ಡಿದೆ ಎಂದು ಹದಿನೈದು ವರ್ಷದಿಂದಲೂ  ಹೇಳುತ್ತಿದ್ದೀರಿ...ಅದು ಒಮ್ಮೆ ಆದರೂ ನೋಡಲೇ ಇಲ್ಲ... ಅವಳ ಪಾಲಿಗೆ ಅದೊಂದು ' ಈಗ ದುಡ್ಡು ಇಲ್ಲ  ಏನೂ ಕೊಡಿಸಲಾಗುವುದಿಲ್ಲ ' ಎಂದು ನೇರವಾಗಿ ಹೇಳಲಾಗದೇ  "ನನ್ನದು ದುಡ್ಡು ಇದೆ " ಅಂತ ಹೇಳಿಕೊಂಡು ಒಂದಷ್ಟು ದಿನ ಕಳೆದಿರುವೆ.ನಾನು ನಿಜವಾಗ್ಲು ಅವಳಿಗೆ shopping ನ ಆಸೆ ಬಿಟ್ಟು Shop ಇಂದ ಹೊರಗಡೆ ಬರಲು ಹೇಳಿದ್ದು.. ಅದರಿಂದ ನನಗೂ ಏನೋ  ಸಮಾಧಾನ.. ಖರ್ಚು ಮಾಡಲು ದುಡ್ಡಿಲ್ಲದಿದ್ದಾಗ  ಏನನ್ನೋ ತೆಗೆದುಕೊಳ್ಳಲು ಹೆಂಡತಿ ಕೇಳಿದಾಗ ಮುಂದಿನ ಸರಿ ಬಂದಾಗ ನೋಡೋಣ ಎಂದೇಳಿದರೆ ಅದೆಷ್ಟು ಗೊಣ ಗೊಣ ಎಂದು, ಎಷ್ಟು ಸರಿ ಬಂದರೂ ಅಷ್ಟೇ ಎನ್ನುವಂತಹ ಹೇಳಿಕೆಗಳು ಕೆಲವೊಮ್ಮೆ ಕಿರಿ ಕಿರಿಯನ್ನು ಉಂಟುಮಾಡುತ್ತಿರುತ್ತಾವೆ. ಅದಕ್ಕೆ ನಾವೂ ಕಿರಿಕಿರಿ ಮಾಡಿಕೊಂಡರೇ ನಷ್ಟದಲ್ಲಿ ನಷ್ಟ ಇನ್ನೂ ಕಷ್ಟ ಆಗ...

ರೂಟ್ ಮ್ಯಾಪ್...

ಇಮೇಜ್
ರೂಟ್ ಮ್ಯಾಪ್.... (~Route Map~ ROOT MAP) ನನಗೆ ಆರೇಳು ವರ್ಷ ಇರಬೇಕು... ನಮ್ಮ ಮನೆಯು ಅಡವಿಯಲ್ಲಿ ಇದ್ದುದರಿಂದ ಅದೆಲ್ಲೆಂದಲೋ ಬಂದು ಸೇರಿದ್ದ ನಾನ ಗಾತ್ರದ ಕಪ್ಪೆಗಳು ನಮ್ಮ ಮನೆಯಲ್ಲಿ ಎಲ್ಲೆಂದರಲ್ಲೇ ಇರುತ್ತಿದ್ದವು. ಬೇಸಿಗೆಯಲ್ಲಿ ಮಾತ್ರ ತಣ್ಣೀರಿಗೆ ಇಡುತ್ತಿದ್ದ ಗುಡಾಣದ(ಮಡಿಕೆ ) ಮಗ್ಗುಲಲ್ಲಿ  ಬಸವಳಿದಂತೆ ಹೊಟ್ಟೆಯೆಲ್ಲಾ ಮರಳಿಗೆ ತಾಗುವಂತೆ ಮಾಡಿ ವಟ ಪೆಟ್ಟಿಗೆಯನ್ನು ಅಲ್ಲಾಡಿಸುತ್ತಾ ಮಲಗಿರುತ್ತಿದ್ದವು.. ಆಗಾಗ ಚಳಿ ಕಾಯಿಸಲು ಒಲೆಯ ಸಮೀಪ ಹೋಗುತ್ತಿದ್ದ ನಾನು ಕೊಳ್ಳಿಯಿಂದ ಸುಟ್ಟಿದ್ದು ಇದೆ.ಆದರೆ ಅವು ಮಾತ್ರ ನಮ್ಮ ಮನೆಯ ಗುಡಾಣದ ತಾಣ ಬಿಟ್ಟು ಹೋಗುತ್ತಿರಲಿಲ್ಲ. ಬೆಳಗ್ಗೆ ಮತ್ತು ಸಂಜೆ ಕಾಲು ಕಾಲಿಗೆ ಸಿಕ್ಕುತ್ತಿದ್ದವು.ಇಂದು ಕಾಲಿಗೆ ಕಪ್ಪೆ ಸಿಗುವ ಹಾಗೆ ಮುಂದೊಂದು ದಿನ ಹಾವುಗಳು ಕಾಲಿಗೆ ಸಿಗುವುದು ಖಚಿತ ಎಂದು ಅನಿಸುತ್ತಿತ್ತು. ದಿನ ಬೆಳಗಾದರೆ ಮನೆಯ ದೊಡ್ಡವರೆಲ್ಲರೂ ಹೊಲಕ್ಕೆ, ಸಣ್ಣವರೆಲ್ಲರೂ ಶಾಲೆಗೆ ಹೋದಾಗ ಲೆಕ್ಕವಿಲ್ಲದಷ್ಟು ಬಾರಿ ನಾಗರ ಹಾವುಗಳು ಬಂದು  ಕಪ್ಪೆಗಳನ್ನು ನುಗ್ಗಿ ಹೋಗಿವೆ... ಅದರಲ್ಲಿ ಕೆಲವು ಹಾವುಗಳು ನಮ್ಮ ಅಪ್ಪನ ಕೈಗೆ ಸಿಕ್ಕು ತಮ್ಮ ಅಂತ್ಯವನ್ನೂ ಕಂಡಿವೆ. ಹಾವುಗಳು ಕಪ್ಪೆಯನ್ನು ನೋಡಿಯೇ ಬರುತ್ತಿದ್ದವೋ... ಅಥವಾ  ಆಹಾರ ಹುಡುಕಿಕೊಂಡು ಬರುತ್ತಿದ್ದಾಗ ಆಕಸ್ಮಿಕವಾಗಿ ಕಂಡವೋ ಏನೋ..?? ದಿನವೂ ಕಾಣುತ್ತಿದ್ದ ಒಂದೊ -ಎರಡೋ ಕಪ್ಪೆಗಳು ಕಾಣುತ್ತಿಲ್ಲವಾದರೆ ಯ...

ಕನಸು ಕಥೆಯಾದಾಗ ಕನಸು -9

ಇಮೇಜ್
#ಕನಸು_ಕಥೆಯಾದಾಗ...     _ಕನಸು-09-ನಾಗಲೋಕ_ ಕಳೆದ ಐದಾರು ವರ್ಷಗಳ ಹಿಂದೆ ಒಮ್ಮೆ  ನಾನು ಮತ್ತು ಕುಟುಂಬ ಮಕ್ಕಳೊಂದಿಗೆ  ಕೆಮ್ಮಣ್ಣುಗುಂಡಿ Z ಪಾಯಿಂಟ್ ಗೆ ಟ್ರೆಕ್ಕಿಂಗ್ ಹೋಗಿದ್ದೆವು.ದಿಗಂತದ ಅಮೋಘ ದರ್ಶನ ಆಗುವುದರೊಂದಿಗೆ ಭದ್ರಾ ಡ್ಯಾಂ, ಡ್ಯಾಂ ನ ಹೀನ್ನೀರಿನ ಆಚೆ ಇರುವ ಅರಣ್ಯಪ್ರದೇಶದ ವಿಹಂಗಮ ನೋಟದ ಸವಿ ಸವಿಯುತ್ತಾ, ಚುಮು ಚುಮು ತಂಗಾಳಿಯಲ್ಲಿ  ಆಳೆತ್ತರ ಬೆಳೆದ  ಪ್ರೈರಿ ಹುಲ್ಲುಗಾವಲಿನಂತಿದ್ದ ಹಸಿರ ಹಾಸು ಪ್ರದೇಶದಲ್ಲಿ ಕುಳಿತು,ಮಲಗಿ ,ಹೊರಳಾಡಿ ಯಾವ್ಯಾವುದೋ ಭಂಗಿಯಲ್ಲಿ ಪೋಟೋ ತೆಗೆಸಿಕೊಂಡು ಇಳಿಯುವಾಗ ಗುಡ್ಡದ ಸಂದಿಯಿಂದ ಇಳಿದು ಬರುತ್ತಿದ್ದ ಸಣ್ಣ ಜಲಪಾತದ ಮುತ್ತಿನಂಥ ನೀರಿನಲಿ ನಲಿದಾಡಿ ಹಿಂದಿರುಗುವಾಗ  ನಮ್ಮ ಜೊತೆಯಿದ್ದ ಶಿವು ಎಂಬ ಹುಡುಗನ ಇಮ್ಮಡಿಯಿಂದ ರಕ್ತ ಕಾರುತ್ತಿತ್ತು. ಸೃಷ್ಠಿಯ ವಿಚಿತ್ರ ಜೀವಿ ಜಿಗಣೆಯೊಂದು ಕಚ್ಚಿ ರಕ್ತ ಕುಡಿದು ಬಿಟ್ಟ ಕಾರಣ ರಕ್ತ ಸೋರುತಿತ್ತು.  ಆಗ ಅಲ್ಲಿಯವರೆಗೆ  ಎತ್ತರದಲ್ಲಿ ಮೇಲಿನ ಹುಲ್ಲುಗಾವಲಿನಲ್ಲಿ ನಮಗೆ ಯಾವ ಜಿಗಣೆಯು ಕಾಣಲಿಲ್ಲ ಹಾಗೂ ಕಚ್ಚಲಿಲ್ಲವಾದರೂ ಕೆಳಗೆ ನಡೆದು ಬರು ಬರುತ್ತಾ  ಅವನಿಗೆ ಕಚ್ಚಿರಬಹುದು. ಆಗ ಮಕ್ಕಳನ್ನು ಹುಷಾರಾಗಿ ನೋಡಿಕೊಳ್ಳುತ್ತಾ  ಕಾರು ನಿಲ್ಲಿಸಿದ ಜಾಗಕ್ಕೆ ಬರುತ್ತಿರುವಾಗ ಮದ್ಯದಲ್ಲಿ ಒಂದು ಮಕ್ಕಳು ಆಟ ಆಡಲು ಪಾರ್ಕದನ್ನು  ಅರಣ್ಯ ಇಲಾಖೆಯವರು ಮಾಡಿದ್ದಾರೆ. ಅ...